ಅಲೀಮುದ್ದೀನ್ ಅನ್ಸಾರಿ ಹತ್ಯೆ ಪ್ರಕರಣ: ಗೋರಕ್ಷಕ ಸಮಿತಿಯ ಇಬ್ಬರಿಗೆ ನ್ಯಾಯಾಂಗ ಬಂಧನ

Update: 2017-07-04 08:27 GMT

ರಾಂಚಿ, ಜು.4: ಮಾಂಸ ವ್ಯಾಪಾರಿ ಅಲೀಮುದ್ದೀನ್ ಅನ್ಸಾರಿಯವರನ್ನು ಹೊಡೆದು ಕೊಂದ ಪ್ರಕರಣದ ಪ್ರಮುಖ ಆರೋಪಿಗಳಾದ ಸ್ಥಳೀಯ ಗೋರಕ್ಷಕ ಸಮಿತಿಯ ಇಬ್ಬರು ರಾಮ್ ಗರ್ ಜಿಲ್ಲಾ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ.

ಸ್ಥಳೀಯ ಗೋರಕ್ಷಕ ಸಮಿತಿಯ ಸದಸ್ಯರಾದ ದೀಪಕ್ ಮಿಶ್ರಾ ಹಾಗೂ ಚೋಟು ವರ್ಮಾ ನ್ಯಾಯಾಲಯದ ಮುಂದೆ ಶರಣಾಗಿದ್ದು, ಇವರಿಬ್ಬರೂ ಅಲೀಮುದ್ದೀನ್ ಅನ್ಸಾರಿಯವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ 10 ಮಂದಿಯನ್ನು ಬಂಧಿಸಲಾಗಿದ್ದು, ಐವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಎಫ್ ಐ ಆರ್ ನಲ್ಲಿ ಹೆಸರಿಲ್ಲದ ಇತರ ಐವರನ್ನೂ ಸಹ ಬಂಧಿಸಲಾಗಿದೆ.

ಮಿಶ್ರಾ ಹಾಗೂ ವರ್ಮಾ ಜಿಲ್ಲಾ ನ್ಯಾಯಾಲಯದ ಮುಂದೆ ಶರಣಾಗಿದ್ದು, ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News