ಹನೂರು ಪಟ್ಟಣ ಬಂದ್ಗೆ ಉತ್ತಮ ಪ್ರತಿಕ್ರಿಯೆ
ಹನೂರು,ಜು.6: ಪಟ್ಟಣದ ಬಂಡಳ್ಳಿ ರಸ್ತೆಯಲ್ಲಿರುವ ಮದ್ಯದಂಗಡಿಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಕರೆನೀಡಿದ್ದ ಹನೂರು ಪಟ್ಟಣ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಸರ್ವೋಚ್ಛ ನ್ಯಾಯಾಲಯವು ನೀಡಿದ ತೀರ್ಪಿನನ್ವಯ ಪಟ್ಟಣದ ಮದ್ಯದಂಗಡಿಗಳು ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳಿಂದ 220 ಮೀಟರ್ ದೂರಕ್ಕೆ ಸ್ಥಳಾಂತರಗೊಳ್ಳಬೇಕಾಗಿತ್ತು. ಈ ಆದೇಶದನ್ವಯ ಪಟ್ಟಣದ 2 ಬಾರ್ಗಳು ಬಂಡಳ್ಳಿ ರಸ್ತೆಗೆ ಸ್ಥಳಾಂತರಗೊಂಡವು. ಈ ಮೊದಲೇ ಇದ್ದ ಎರಡು ಬಾರ್ಗಳಿಂದ ಕಿರಿಕಿರಿ ಅನುಭವಿಸುತ್ತಿದ್ದು ಸಾರ್ವಜನಿಕರು ಮತ್ತೂ ಎರಡು ಬಾರ್ ಪ್ರಾರಂಭವಾದ ಹಿನ್ನೆಲೆ ಹೆಚ್ಚಿನ ಕಿರಿಕಿರಿ ಅನುಭವಿಸುವಂತಾಗಿತ್ತು. ಅಲ್ಲದೆ ವಾಹನ ದಟ್ಟಣೆ ಹೆಚ್ಚಾಗಿ ಶಾಲಾ ಕಾಲೇಜುಗಳಿಗೆ ತೆರಳಬೇಕಿದ್ದ ವಿದ್ಯಾರ್ಥಿಗಳು, ದೈನಂದಿನ ಚಟುವಟಿಕೆಗಳಿಗೆ ಬ್ಯಾಂಕ್, ಆಸ್ಪತ್ರೆ, ಗ್ಯಾಸ್ ಏಜೆನ್ಸಿಗೆ ಬರುತ್ತಿದ್ದ ಸಾರ್ವಜನಿಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತೆರಳುತ್ತಿದ್ದ ಸರ್ಕಾರಿ ಇಲಾಖಾ ನೌಕರರು ಪರಿತಪಿಸುವಂತಾಗಿತ್ತು. ಇದನ್ನು ಮನಗಂಡ ಸಾರ್ವಜನಿಕರು ಇಂದು ಹನೂರು ಪಟ್ಟಣದ ಸ್ವಯಂಘೋಷಿತ ಬಂದ್ಗೆ ಕರೆ ನೀಡಿದ್ದರು.
ಉಪವಿಭಾಗಾಧಿಕಾರಿಗಳ ಭೇಟಿ: ಹನೂರು ಪಟ್ಟಣದ ಬಂದ್ಗೆ ಕರೆ ನಿಡಿದ್ದ ಹಿನ್ನೆಲೆ ಬೇಟಿ ನಿಡಿದ ಉಪವಿಭಾಗಾಧಿಕಾರಿ ರೂಪ, ಅಬಕಾರಿ ನಿರೀಕ್ಷಕ ವೀಣಾ ಮತ್ತು ಅಧಿಕಾರಿಗಳ ತಂಡ ಸಾರ್ವಜನಿಕರಿಂದ ಅಹವಾಲು ಆಲಿಸಿದರು. ಈ ವೇಳೆ ಮಾತನಾಡಿದ ಸಾರ್ವಜನಿಕರು ಇದೊಂದು ಜನಿನಿಬಿಡ ಪ್ರದೇಶವಾಗಿದ್ದು ಪ್ರತಿನಿತ್ಯ 3,000ಶಾಲಾ ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಶಾಲಾ ಕಾಲೇಜುಗಳಿಗೆ ತೆರಳಬೇಕಿದೆ. ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರು, ಸಾರ್ವಜನಿಕರು ಸಹಸ್ರಾಋಉ ಸಂಖ್ಯೆಯಲ್ಲಿ ಬ್ಯಾಂಕುಗಳಿಗೆ ಆಗಮಿಸುತ್ತಾರೆ, ಕ್ಷೇತ್ರ ಶಿಕ್ಷಣಾಧಿಖಾರಿಗಳ ಕಚೇರಿಗೂ ಇದೇ ಮಾರ್ಗವಾಗಿ ತೆರಳಬೇಕಿರುವುದರಿಮದ ನೂರಾರು ಸರ್ಕಾರಿ ನೌಕರರು ಇದೇ ಮಾರ್ಗವಾಗಿ ಸಂಚರಿಸುತ್ತಾರೆ. ಇಂತಹ ರಸ್ತೆಯಲ್ಲಿ ಮದ್ಯದಂಗಡಿಗಳಿಗೆ ಅನುಮತಿ ಕಲ್ಪಿಸುವುದು ಬೇಡ ಎಂದು ಮನವಿ ಮಾಡಿ ಪತ್ರ ನೀಡಿದ್ದರೂ ಮತ್ತೆ ಅನುಮತಿ ಕಲ್ಪಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಜಯಪ್ರಕಾಶ್ಗುಪ್ತ, ರಾಜೂಗೌಡ, ಬಾಲರಾಜ್ನಾಯ್ಡು, ಟಿಎಪಿಸಿಎಂಎಸ್ ನಿರ್ದೇಶಕ ಮಾದೇಶ್,ಮುಖಂಡರಾದ ಚಿಕ್ಕತಮ್ಮಯ್ಯ, ವೆಂಕಟರಮಣ ನಾಯ್ಡು, ನಂಜುಂಡೇಗೌಡ, ರಾಜೂಗೌಡ, ಕೃಷ್ನೇಗೌಡ, ಮಾದೇಶ್, ವೆಂಕಟೇಶ್, ಸಿದ್ದೇಗೌಡ ಸೇರಿದಂತೆ 300ಕ್ಕೂ ಹೆಚ್ಚು ಸಾರ್ವಜನಿಕರು ಹಆಜರಿದ್ದರು.
ವಾಹನ ಸಂಚಾರ ಯಥಾಸ್ಥಿತಿ: ಹನೂರು ಪಟ್ಟಣ ಬಂದ್ಗೆ ಕರೆ ನಿಡಿದ್ದರೂ ವಾಹನ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗಲಿಲ್ಲ. ಬೆಳಿಗ್ಗೆಯಿಂದಲೂ ವಾಹನ ಸಂಚಾರ ಯಥಾಸ್ಥಿತಿಯಲ್ಲಿತ್ತು. ಬ್ಯಾಂಕುಗಳು, ಸರ್ಕಾರಿ ಕಚೇರಿಗಳು ಯಥಾಸ್ಥಿತಿ ಕಾರ್ಯನಿರ್ವಹಿಸುತ್ತಿದ್ದವು. ಪಟ್ಟಣದ ಕ್ರಿಸ್ತರಾಜ ಶಾಲೆಗೆ ರಜೆ ಘೊಷಿಸಲಾಗಿತ್ತು.
ಬಿಗಿಭದ್ರತೆ: ಹನೂರು ಪಟ್ಟಣ ಬಂದ್ಗೆ ಕರೆ ನೀಡಿದ್ದ ಹಿನ್ನೆಲೆ ಡಿವೈಎಸ್ಪಿ ಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ಬಂದೋಬಸ್ತ್ ನಲ್ಲಿ ಕೊಳ್ಳೇಗಾಲ ವೃತ್ತ ನಿರೀಕ್ಷಕ ಅಮರ್ನಾರಾಯಣ್, ರಾಮಾಪುರ ವೃತ್ತ ನಿರೀಕ್ಷಕ ಗೋವಿಮದರಾಜು, ಹನುರು ವೃತ್ತ ನಿರೀಕ್ಷಕ ಪರಶುರಾಮ್,150ಕ್ಕೂ ಗೆಚ್ಚು ಪೊಲೀಸ್ ಸಿಬ್ಬಂದಿ, ಗೃಹ ರಕ್ಷಕ ದಳದ ಸಿಬ್ಬಂದಿ, ಕೆಎಸ್ಆರ್ಪಿ ತುಕ್ಕಡಿ ನಿಯೋಜಿಸಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.