×
Ad

ರಸ್ತೆ ಅಪಘಾತ : ಬೈಕ್ ಸವಾರ ಸಾವು

Update: 2017-07-16 21:21 IST

ಕುಶಾಲನಗರ,ಜು.16 ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಮಡಿಕೇರಿ ಮಾರ್ಗದ ನಿಸರ್ಗದಾಮದ ಬಳಿ ಮಿನಿಬಸ್ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟ ಘಟನೆ ನಡೆದಿದೆ.

ರವಿವಾರ ಸಂಜೆ  ಕುಶಾಲನಗರ  ಕಡೆ ದಾವಿಸಿ ಬರುತ್ತಿದ್ದ ಮಿನಿಬಸ್‍ವೊಂದು ಬೈಕ್ ಗೆ ಢಿಕ್ಕಿ ಹೊಡೆದಿದೆ.

ಮೃತರು ಗುಮ್ಮನಕೊಲ್ಲಿ ನಿವಾಸಿ ಅಟೋ ಚಾಲಕ ಸೋಮಣ್ಣ ಮತ್ತು ನಾಗಮ್ಮನವರ  ದ್ವೀತಿಯ ಪುತ್ರ ಪವನ್ 22 ಎಂದು ಗುರುತಿಸಲಾಗಿದೆ.ಮಿನಿಬಸ್ ವಾಹನ ಸಂಖ್ಯೆ ಕೆ.ಎ.51 ಡಿ.6210 ಎಂದು ಗುರುತಿಸಲಾಗಿದ್ದು. ಬಸ್ ಅಪಘಾತ ನಡೆಸಿ ನಿಲ್ಲಿಸದೇ ಪಿರಿಯಾಪಟ್ಟಣ ಮಾರ್ಗವಾಗಿ  ಚಲಿಸಿದೆ ಎಂದು ಪೋಲಿಸ್ ಮಾಹಿತಿಗಳು ತಿಳಿಸಿದೆ.

ಸ್ಥಳಕ್ಕೆ ಕುಶಾಲನಗರ ಸಂಚಾರಿ ಆಗಮಿಸಿ ಪ್ರಕರಣಕ್ಕೆ ಸಂಭಂದಿಸಿದಂತೆ ಕೇಸು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News