ಡೆಂಗ್ ಗೆ ವಿದ್ಯಾರ್ಥಿ ಬಲಿ

Update: 2017-07-17 13:29 GMT

ದಾವಣಗೆರೆ:,ಜು.17: ಮಹಾಮಾರಿ ಡೆಂಗ್ ಗೆ ವಿದ್ಯಾರ್ಥಿಯೊಬ್ಬ ಬಲಿಯಾದ ಘಟನೆ ನಗರದಲ್ಲಿ ಸೋಮವಾರ ನಡೆದಿದೆ.

ನಗರದ ಜಾಲಿನಗರದ ನಿವಾಸಿಗಳಾದ ವಿಜಯಕುಮಾರ್ ಹಾಗೂ ಧನಲಕ್ಷ್ಮೀ ಪುತ್ರ ಪ್ರಮೋದ್ (18) ಎಂಬಾತನೇ ಡೆಂಗ್ ಜ್ವರಕ್ಕೆ ಬಲಿಯಾದ ವಿದ್ಯಾರ್ಥಿ. ಕಳೆದ ಶುಕ್ರವಾರ ಜ್ವರಕ್ಕೆ ತುತ್ತಾಗಿದ್ದ ಪ್ರಮೋದ್‍ನನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ರವಿವಾರ ಸಂಜೆ ವೇಳೆಗೆ ಚಿಂತಾಜನಕ ಸ್ಥಿತಿಗೆ ತಲುಪಿದ್ದ ಪ್ರಮೋದ್ ಆರೋಗ್ಯ ಸ್ಥಿತಿ ಗಮನಿಸಿದ ಕುಟುಂಬದವರು, ರಾತ್ರಿಯೇ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಮಾರ್ಗ ಮಧ್ಯದಲ್ಲಿಯೇ ಪ್ರಮೋದ್ ಕೊನೆಯುಸಿರು ಎಳೆದಿದ್ದಾನೆ ಎನ್ನಲಾಗಿದೆ. ಪ್ರಮೋದ್ ನಗರದ ಜಿಎಂಐಟಿ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News