ನದಿಗೆ ಹಾರಿ ಗೃಹಿಣಿ ಆತ್ಮಹತ್ಯೆ
Update: 2017-07-25 14:55 GMT
ಮಂಡ್ಯ, ಜು.25: ಜೀವನದಲ್ಲಿ ಜಿಗುಪ್ಸೆಗೊಂಡು ಗೃಹಿಣಿಯೊಬ್ಬರು ಶ್ರೀರಂಗಪಟ್ಟಣ ಬಳಿ ಕಾವೇರಿ ನದಿಗೆ ಹಾರಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೈಸೂರು ಜಿಲ್ಲೆ ಟಿ.ನರಸಿಪುರ ತಾಲೂಕಿನ ಬನ್ನೂರು ಸಮೀಪದ ಕೋಟೆಹುಣಸಗಳ್ಳಿ ಗ್ರಾಮದ ಪುಟ್ಟಸ್ವಾಮಿ ಎಂಬುವರ ಪುತ್ರಿ ಉಷಾಪ್ರಿಯ(26) ಆತ್ಮಹತ್ಯೆ ಮಾಡಿಕೊಂಡವರು.
ತಾನು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಆಕೆ ತನ್ನ ತಂದೆಗೆ ದೂರವಾಣಿ ಕರೆಮಾಡಿದ್ದಳು ಎನ್ನಲಾಗಿದ್ದು, ಅಂತೆಯೇ ನದಿಯಲ್ಲಿ ಹುಡುಕಿದಾಗ ಆಕೆಯ ಶವಪತ್ತೆಯಾಗಿದೆ.
ಉಷಾಪ್ರಿಯಳನ್ನು ಯಾಚೇನಹಳ್ಳಿ ಗ್ರಾಮದ ಜಯಂತ್ ಅಲಿಯಾಸ್ ಅನೀಲ್ ಮದುವೆ ಮಾಡಲಾಗಿದ್ದು, ಪತಿ ಮೈಸೂರಿನ ಖಾಸಗಿ ಕಂಪನಿಯಲ್ಲಿ, ಪತ್ನಿ ಕೆ.ಆರ್.ಆಸ್ಪತ್ರೆಯಲ್ಲಿ ಅರೆಕಾಲಿಕ ದಾದಿಯಾಗಿದ್ದರು ಎಂದು ತಿಳಿದು ಬಂದಿದೆ.
ಶ್ರೀರಂಗಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.