ಸಾಲಬಾಧೆ:ನೇಣುಬಿಗಿದು ರೈತ ಆತ್ಮಹತ್ಯೆ

Update: 2017-07-25 14:56 GMT

ಪಾಂಡವಪುರ, ಜು.25: ಸಾಲಬಾಧೆ ತಾಳಲಾರದೆ ರೈತ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಇಳ್ಳೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.

ಪಾಪೇಗೌಡರ ಪುತ್ರ ಚನ್ನಕೇಶವ(34) ಆತ್ಮಹತ್ಯೆ ಮಾಡಿಕೊಂಡಿದ್ದು, ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ತಂದೆ ಹೆಸರಿನಲ್ಲಿರುವ ನಾಲ್ಕು ಎಕರೆ ಭೂಮಿಯಲ್ಲಿ ವ್ಯವಸಾಯ ಮಾಡಿಕೊಂಡಿದ್ದರು.

ಕೃಷಿಗಾಗಿ ಚಿನಕುರಳಿ ಎಸ್‍ಬಿಎಂ ಶಾಖೆಯಲ್ಲಿ 1.40 ಲಕ್ಷ ರೂ, ಸ್ತ್ರೀ ಸ್ವಸಹಾಯ ಸಂಘಗಳಿಂದ 1 ಲಕ್ಷ ರೂ. ಹಾಗು 2 ಲಕ್ಷ ರೂ. ಕೈಸಾಲ ಪಡೆದಿದ್ದರು ಎನ್ನಲಾಗಿದ್ದು, ಬೆಳೆಯಿಲ್ಲದೆ ಸಾಲ ಪಾವತಿಸಲು ಆಗಿರಲಿಲ್ಲ.

ಶಾಸಕ ಕೆ.ಎಸ್.ಪುಟ್ಟಣ್ಣಯ್ಯ, ತಹಸೀಲ್ದಾರ್ ಡಿ.ಹನುಮಂತಪ್ಪ ಮತ್ತು ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News