ರಮಾನಾಥ್ ರೈಗೆ ಗೃಹಖಾತೆ ?

Update: 2017-07-25 17:28 GMT

ಬೆಂಗಳೂರು, ಜು.25: ಕಾಂಗ್ರೆಸ್‌ನ ಹಿರಿಯ ಮುಖಂಡ ರಮಾನಾಥ್ ರೈಗೆ ಅರಣ್ಯ ಖಾತೆಯ ಬದಲಿಗೆ ಗೃಹಖಾತೆಯನ್ನು ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಗೃಹ ಖಾತೆ ತೆರವಾಗಿದ್ದು, ಈ ಖಾತೆಯು ಮುಖ್ಯಮಂತ್ರಿಯ ಕೈಯಲ್ಲಿತ್ತು. ಗೃಹ ಖಾತೆಯನ್ನು ನಿಭಾಯಿಸಬೇಕೆಂದು ರೈಗೆ ಸಿಎಂ ಸೂಚಿಸಿದ್ದು, ಅದಕ್ಕೆ ಅವರು ಒಪ್ಪಿಗೆ ನೀಡಿದ್ದಾರೆಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News