ಯುವಕ ನಾಪತ್ತೆ
Update: 2017-07-28 13:24 GMT
ಚಿಕ್ಕಮಗಳೂರು, ಜು.28: ನಗರದ ರಾಂಪರ ಬಡಾವಣೆಯ ಶ್ರೀನಿವಾಸ ನಗರ ಎಂಬಲ್ಲಿನ ಶರತ್ ಕುಮಾರ್ (25)ಎಂಬ ಯುವಕ ನಾಪತ್ತೆಯಾಗಿರುವ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯಿಂದ ಟಾಟಾ ಏಸ್ ಗೂಡ್ಸ್ ಆಟೋ ನಂ ಕೆಎ-46.3722 ವಾಹನವ್ನು ಬಾಡಿಗೆ ಇದೆ ಎಂದು ಸಖರಾಯ ಪಟ್ಟಣಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವನು ನಂತರ ಮನೆಗೆ ಬಾರದೆ ಕಾಣೆಯಾಗಿದ್ದಾರೆ.
5.5 ಅಡಿ ಎತ್ತರ, ಗೋದಿ ಮೈ ಬಣ್ಣ, ಎಣ್ಣೆಗೆಂಪು ಮೈ ಬಣ್ಣ, ಸಾದಾರಣ ಮೈ ಕಟ್ಟು, ಕಪ್ಪು ತಲೆ ಕೂದಲು, ಕೊಲು ಮುಖ, ಸುಮಾರು ಐದುವರೆ ಅಡಿ ಎತ್ತರ, ಬಲ ಕೈಯಲ್ಲಿ ವೆಲ್ಲಿಯಮ್ಮ ಎಂದು ಹಚ್ಚೆ, ಹಳದಿ ಬಣ್ಣದ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. ಕನ್ನಡ, ಹಿಂದಿ, ತಮಿಳು ಮಾತನಾಡುವ ಈತನ ಸುಳಿವು ದೊರೆತರೆ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.