ಮೀನಕಳಿಯದಲ್ಲಿ ಮುಳುಗಿದ ಬೋಟ್: ಓರ್ವ ನೀರುಪಾಲು; ವಿಡಿಯೋ ಸುದ್ದಿ
Update: 2017-07-30 15:45 GMT
ಮೀನುಗಾರಿಗೆಕೆಂದು ತೆರಳಿದ್ದ ನಾಡದೋಣಿಯೊಂದು ಗಾಳಿ ಹಾಗೂ ಅಲೆಗಳ ಅಬ್ಬರಕ್ಕೆ ಸಮುದ್ರದಲ್ಲಿ ಮಗುಚಿ ಬಿದ್ದ ಪರಿಣಾಮ ದೋಣಿಯಲ್ಲಿದ್ದ ಓರ್ವ ಮೀನುಗಾರ ನೀರುಪಾಲಾಗಿರುವ ಘಟನೆ ಬೈಕಂಪಾಡಿ ಸಮೀಪದ ಮೀನಕಳಿಯ ಎಂಬಲ್ಲಿ ನಡೆದಿದೆ. ದೋಣಿಯಲ್ಲಿದ್ದ ಇತರ ಮೂವರು ರಕ್ಷಿಸಲ್ಪಟ್ಟಿದ್ದಾರೆ. ಉಳ್ಳಾಲ ನಿವಾಸಿ ಪ್ರೇಮನಾಥ ಸಾಲ್ಯಾನ್ (50) ನೀರುಪಾಲಾಗಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ.