ಮಕ್ಕಳ ಪ್ರತಿಭೆಯನ್ನು ಕಡೆಗಣಿಸಬಾರದು: ಜ್ಯೋತಿ ಪ್ರಕಾಶ್ ಮಿರ್ಜಿ
ಹಾಸನ, ಆ. 6: ಮಕ್ಕಳ ಪ್ರತಿಭೆಯನ್ನು ಯಾರು ಕಡೆಗಣಿಸದೆ ಪೋಷಕರು ಉತ್ತೇಜಿಸುವಂತೆ ನಿವೃತ್ತ ಪೊಲೀಸ್ ಕಮಿಷನರ್ ಜ್ಯೋತಿ ಪ್ರಕಾಶ್ ಮಿರ್ಜಿ ಕರೆ ನೀಡಿದರು.
ನಗರದ ತಣ್ಣೀರು ಹಳ್ಳದ ಬಳಿ ಇರುವ ಶ್ರೀ ಶಿವಲೀಂಗೇಶ್ವರ ಕಲ್ಯಾಣ ಮಂದಿರದಲ್ಲಿ ಲ್ಲಾ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘ(ರಿ) ಹಾಸನ ಜಿಲ್ಲಾ ಘಟಕದಿಂದ ರವಿವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವೀರಶೈವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಸಾಧಿಸುವ ಛಲ ಇದ್ದರೇ ಮಾತ್ರ ಗುರಿ ತಲುಪಲು ಸಾಧ್ಯ . ಇಂದಿನ ಶ್ರಮ ಇದ್ದರೇ ಮುಂದಿನ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಕಿವಿಮಾತು ಹೇಳಿದರು.
ಇಂದಿನ ದಿನಗಳಲ್ಲಿ ಮಕ್ಕಳು ಇಂಜಿನಿಯರ್, ಡಾಕ್ಟರ್, ಐಎಎಸ್ ಇತರೆ ಉದ್ದೇಶವನ್ನು ಪೋಷಕರು ಹೊಂದಿರುತ್ತಾರೆ. ಅದಕ್ಕಿಂತ ಮುಖ್ಯವಾಗಿ ಮಕ್ಕಳ ಪ್ರತಿಭೆ ಏನು ಇದೆ ಎಂಬುದನ್ನು ಅರ್ಥ ಮಾಡಿಕೊಂಡು ಪೋಷಿಸುವ ಕೆಲಸ ಮಾಡಿದರೇ ಸಮಾಜಕ್ಕೆ, ದೇಶಕ್ಕೆ ಕೀರ್ತಿ ತರುವಂತರಾಗುತ್ತಾರೆ ಎಂದು ಸಲಹೆ ನೀಡಿದರು.
ಸ್ಪರ್ದಾತ್ಮಕ ಯುಗದಲ್ಲಿ ಜ್ಞಾನ ಎಂಬುದು ಪ್ರಮುಖ. ಅದರಲ್ಲೂ ಯಾವ ಪ್ರತಿಭೆ ಆಗಿರಲಿ ಅದನ್ನು ಕಡೆಗಣೀಸಬಾರದು. ಇರುವ ಪ್ರತಿಭೆಗೆ ಉತ್ತೇಜಿಸಿದರೇ ಉನ್ನತ ಶಿಖರಕ್ಕೆ ತರಬಹುದು ಎಂದರು. ಹಾಸನ ನಗರದಲ್ಲಿದ್ದ ಕಿರಣ್ ಇಂದು ಇಸ್ರೋ ಅಧ್ಯಕ್ಷರು. ಇಂದಿನ ಇಂಟರ್ನೆಟ್ ಯುಗದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು ಎಂದು ಹೇಳಿದರು. ಸಮಯಕ್ಕೆ ಯಾರು ದಾಸರಾಗದೆ, ಸಮಯವನ್ನು ನಿಮ್ಮ ಬಳಿ ಬರುವಂತೆ ಮಾಡಿಕೊಳ್ಳುವ ಆಗೇ ದಾಸರನ್ನಾಗಿ ಮಾಡಿಕೊಳ್ಳುವಂತೆ ನೆರೆದಿದ್ದವರಿಗೆ ಕರೆ ನೀಡಿದರು.
ಕಾರ್ಯಕ್ರಮದ ಸಾನಿಧ್ಯವನ್ನುವಹಿಸಿದ್ದ ಹಳೇಬೀಡಿನ ಶ್ರೀ ಪುಷ್ಪಗಿರಿ ಮಠ ಮಠಾಧೀಶರು ಶ್ರೀ ಸೋಮಶೇಖರಸ್ವಾಮೀಜಿ ಆಶೀರ್ವಚನದಲ್ಲಿ ಮಾತನಾಡಿ, ಜೀವನದಲ್ಲಿ ದೊಡ್ಡ ಸಾಧನೆ ಮಾಡಬೇಕಾದರೇ ಅದರದೆ ಆದ ಶಿಸ್ತು ಇದ್ದೆ ಇರುತ್ತದೆ. ಇಷ್ಟಲ್ಲದೆ ಜೊತೆಗೆ ಅವಶ್ಯಕವಾದ ಸಲಕರಣೆಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಜ್ಞಾನವು ಇದ್ದರೇ ಸಮಾಜದಲ್ಲಿ ದೊಡ್ಡ ವ್ಯಕ್ತಿ ಆಗುವುದರಲ್ಲಿ ಯಾವ ಸಂಶಯವಿಲ್ಲ ಎಂದರು.
ಸಮಯ ಪ್ರಜ್ಞೆಯನ್ನು ಮಕ್ಕಳು ಬೆಳೆಸಿಕೊಳ್ಳಬೇಕು. ಇಂದು ಸಂಸ್ಕಾರ ಮತ್ತು ಸ್ಪರ್ದೆ ಇವುಗಳು ಒಂದಕ್ಕೊಂದು ಆಗುವುದಿಲ್ಲ. ಪ್ರತಿ ಕ್ಷೇತ್ರದಲ್ಲೂ ಸ್ಪರ್ದೆ ಎಂಬುದು ಇದೆ. ಆದರೇ ನಮ್ಮಲ್ಲಿ ಕಬ್ಬಡಿ ಆಟ ಆಡುವುದರಲ್ಲಿ ಬಹಳ ಮುಂದೆ ಇದ್ದೇವೆ. ಅದರಲ್ಲೂ ಒಬ್ಬರ ಕಾಲನ್ನು ಇನ್ನೊಬ್ಬರೂ ಎಳೆಯುವುದರಲ್ಲಿ ನಿಸೂಮರಾಗಿದ್ದೇವೆ. ಇಂತಹ ಕಾಲೇಳೆಯುವ ಕೆಲಸ ಕಡಿಮೆ ಆದರೇ ಮಾತ್ರ ದೇಶ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಕಿವಿಮಾತು ಹೇಳಿದರು. ಸಮಾಜದಲ್ಲಿ ಒಂದು ಬದಲಾವಣೆ ತರಬೇಕಾದರೇ ದುರಾಸೆ ಎಂಬುದನ್ನು ಹೊರ ಹಾಕಿ, ಶುರ್ದಧ ಮನಸ್ಸನ್ನು ಒಳ ಇರಬೇಕು ಎಂದು ಕರೆ ನೀಡಿದರು.
ರಾಷ್ಟ್ರೀಯ ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ಉಪಾಧ್ಯಕ್ಷೆ ಚಂದ್ರಕಲಾ ಮಾತನಾಡಿ, ಇತ್ತಿಚಿಗೆ ಅನಾರೋಗ್ಯದಿಂದ ಮಾಜಿ ಶಾಸಕರು ವೀರಶೈವ ಮುಖಂಡರು ಬಿ.ಬಿ. ಶಿವಪ್ಪ ಅವರು ಕೊನೆ ಉಸಿರುವ ಎಳೆದಿದ್ದಾರೆ. ಅವರ ಜೀವಿತವಧಿಯಲ್ಲಿ ಯಾರೇ ಬಂದರೂ ಎಲ್ಲಾರನ್ನು ಸಮಾನ ರೀತಿ ಕಾಣುತ್ತಿದ್ದ ಅಪುರೂಪದ ವ್ಯಕ್ತಿ ಆಗಿದ್ದರು. ಸರಳ, ದಿಟ್ಟ, ನೇರವಾಗಿ ಮಾತನಾಡುವ ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದರು. ಸಮಾಜಕ್ಕೆ ಉತ್ತಮ ಮಾರ್ಗದರ್ಶನವನ್ನು ನೀಡುತ್ತಿದ್ದರು. ಧೀಮಂತ ಚೇತನವಾಗಿದ್ದ ಶಿವಪ್ಪ ಅವರಿಗೆ ಶಾಂತಿ ದೊರಕಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲು ಎಂದು ಹಾರೈಸಿದರು.
ಕಾರ್ಯಕ್ರಮಕ್ಕೆ ಮೊದಲು ಇತ್ತಿಚಿಗೆ ಮೃತರಾದ ಮಾಜಿ ಶಾಸಕ ಬಿ.ಬಿ. ಶಿವಪ್ಪ ಅವರಿಗೆ ಶಾಂತಿ ದೊರಕಲೆಂದು ಎರಡು ನಿಮಿಷ ಮೌನ ಆಚರಿಸಲಾಯಿತು. ನಂತರ 2016-17ನೇ ಸಾಲಿನಲ್ಲಿ ಆಯ್ಕೆಯಾಗಿರುವ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವೀರಶೈವ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಇದೆ ವೇಳೆ ಅರಕಲಗೂಡು ದೊಡ್ಡಮಠದ ಮಠಾದೀಶರು ಶ್ರೀ ಮಲ್ಲಿಕಾರ್ಜನ ಸ್ವಾಮೀಜಿ, ಜಿಲ್ಲಾ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಶಾಸಕರಾದ ಬಿ.ಆರ್ ಗುರುದೇವ್, ಸಕಲೇಶಪುರದ ಉಪ ವಿಭಾಗಾಧಿಕಾರಿ ಪಿ. ಶಿವರಾಜ್, ಅಖಿಲ ಭಾರತ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ವಾರ್ಗೀಶ್ ಪ್ರಸಾದ್, ಹಿರಿಯ ಆಂಗ್ಲ ಪತ್ರಿಕೆ ವರದಿಗಾರ ಬಿ.ಆರ್. ಉದಯಕುಮಾರ್, ಹೆಚ್.ಎನ್. ನಾಗೇಶ್, ವೀರಶೈವ ನೌಕರರ ಸಂಘದ ಗೌರವಾಧ್ಯಕ್ಷ ಯು.ಎಸ್. ಬಸವರಾಜು, ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರ್, ತಹಸೀಲ್ದಾರ್ ಶಿವಶಂಕರಪ್ಪ, ರೇಣುಕ ಪ್ರಸಾದ್ ಇತರರು ಉಪಸ್ಥಿತರಿದ್ದರು.