ರಾಹುಲ್ ಗಾಂಧಿಗೆ ಕೆಪಿಸಿಸಿ ರೈತ ವಿಭಾಗದಿಂದ ಮನವಿ

Update: 2017-08-12 14:25 GMT

ಚಿಕ್ಕಮಗಳೂರು, ಆ.12: ಬಡ್ಡಿ ಮನ್ನಾ ಯೋಜನೆ ಅಸಲು ಪಾವತಿಸಲು ಕಾಲಾವಕಾಶ ನೀಡುವಂತೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ರವರಿಗೆ ಶನಿವಾರ ರಾಯಚೂರಿನಲ್ಲಿ ಕೆಪಿಸಿಸಿ ರೈತ ವಿಭಾಗದ ರಾಜ್ಯ ಅಧ್ಯಕ್ಷ ಸಚಿನ್ ಮೀಗಾ ಮನವಿ ಮಾಡಿದರು.

ಕೆಪಿಸಿಸಿ ಕಿಸಾನ್ ವಿಭಾಗ ರೈತರ ಆತ್ಮಹತ್ಯೆ ತಡೆಕಟ್ಟುವ ವಿಚಾರದಲ್ಲಿ ರಾಜ್ಯದ 30 ಜಿಲ್ಲೆಯ 437 ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ 2015ರಲ್ಲಿ ಭೆೀಟಿ ನೀಡಿ ಸಲ್ಲಿಸಿದ ವರದಿಯನ್ನು ಆಧರಿಸಿ ರಾಹುಲ್ ಗಾಂಧಿ ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿ ಅಸಲು ಪಾವತಿಸಿದ ರೈತರ ಸಂಪೂರ್ಣ ಮನ್ನ ಆದೇಶ 2015ರ ನ.11ರಲ್ಲಿ ಹಾವೇರಿಯ ಕಿಸಾನ್ ಸಮಾವೇಶದಲ್ಲಿ ಘೋಷಣೆ ಮಾಡಿದರು. ಆದರೆ ಸತತ ಬರದ ಹಿನ್ನೆಲೆಯಲ್ಲಿ ಹಾಗು ಚಿಕಮಗಳೂರಿನ ಜಿಲ್ಲೆಯಲ್ಲಿ ಪ್ರಮುಖವಾಗಿ ಶೃಂಗೇರಿ, ಕೊಪ್ಪ, ಕಳಸ ಹಾಗು ಇತರ ಅಡಿಕೆ ಬೆಳೆಗಾರರು ಹಾಳಾಡಿ ಎಳೆ ರೋಗದಿಂದ ತೋಟ ಸಂಪೂರ್ಣ ನಾಶವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News