ಹಾಡಹಗಲೇ ಹಣ ದೋಚಿ ಪರಾರಿ

Update: 2017-08-12 15:40 GMT

ಮಂಡ್ಯ,ಆ.12: ಹಾಡಹಗಲೇ ಬೈಕ್‌ನಲ್ಲಿದ್ದ 2 ಲಕ್ಷ ರೂ. ಹಣ ದೋಚಿ ಪರಾರಿಯಾಗಿರುವ ಘಟನೆ ನಗರದ ಹೊಳಲು ಸರ್ಕಲ್‌ನಲ್ಲಿ ಶುಕ್ರವಾರ ಸಂಜೆ ಜರುಗಿದೆ.

ತಾಲ್ಲೂಕಿನ ಗೊರವಾಲೆ ಗ್ರಾಮದ ಕೃಷ್ಣ ಹಣ ಕಳೆದುಕೊಂಡವರು. ಬ್ಯಾಂಕಿನಿಂದ 2 ಲಕ್ಷ ಹಣ ಡ್ರಾ ಮಾಡಿಕೊಂಡು ಹೋಂಡಾ ಆಕ್ಟೀವಾ ಗಾಡಿಯ ಡಿಕ್ಕಿಯಲ್ಲಿ ಇಟ್ಟುಕೊಂಡಿದ್ದರು. ಹೊಳಲು ಸರ್ಕಲ್‌ನಲ್ಲಿ ತನ್ನ ಬೈಕ್ ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ಕಳ್ಳರು ಡಿಕ್ಕಿ ತೆಗೆದು ಹಣ ದೋಚಿದ್ದಾರೆ. ಹಣ ದೋಚಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನಗರದ ಕೇಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News