ಬಸ್, ಬೈಕ್ ಢಿಕ್ಕಿ : ಓರ್ವನಿಗೆ ಗಾಯ

Update: 2017-08-16 14:47 GMT

ಮಡಿಕೇರಿ, ಆ.16 :ಪಿರಿಯಾಪಟ್ಟಣ ಮಾರ್ಗದಿಂದ ಗೋಣಿಕೊಪ್ಪಕ್ಕೆ ಬರುತ್ತಿದ್ದ ಬಸ್ ಹಾಗೂ ಕಣ್ಣೂರುನಿಂದ ಮೈಸೂರಿಗೆ ತೆರಳುತ್ತಿದ್ದ ಬೈಕ್‍ನ ನಡುವೆ ಹರಿಶ್ಚಂದ್ರಪುರದ ಬಳಿ ಮುಖಾಮುಖಿ ಢಿಕ್ಕಿ ಸಂಭವಿಸಿ, ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾರೆ.

ಕಣ್ಣೂರಿನಿಂದ ಮೈಸೂರಿನೆಡೆಗೆ ಬಸವರಾಜ್ ಪಾಟೀಲ್ ಹಾಗೂ ಪ್ರಣವ್ ಗಿರೀಶ್ ಎಂಬವರು ಪಲ್ಸರ್ ಬೈಕ್‍ನಲ್ಲಿ ತೆರಳುತ್ತಿದ್ದರು.ಗೋಣಿಕೊಪ್ಪಲುವಿನ ಹರಿಶ್ಚಂದ್ರಪುರ ಸಮೀಪ  ಬೈಕ್ ಹಾಗೂ ಸರ್ಕಾರಿ ಬಸ್‍ನ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ.

ಅವಘಡ ಸಂದರ್ಭ ಬೈಕ್ ಸರ್ಕಾರಿ ಬಸ್‍ನ ಕೆಳಗೆ ಸಿಲುಕಿಕೊಂಡಿತ್ತು. ಅಪಘಾತದ ಪರಿಣಾಮ ಬೈಕ್‍ನಲ್ಲಿದ್ದ ಇಬ್ಬರು ತೀವ್ರ ಗಾಯಗಳಿಗೆ ಒಳಗಾಗಿದ್ದು, ಸ್ಥಳೀಯರ ಸಹಾಯದಿಂದ ಅಪಘಾತಕ್ಕೀಡಾದವರನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News