ವಿದ್ಯುತ್ ಸ್ಪರ್ಶಿಸಿ ಕೂಲಿ ಕಾರ್ಮಿಕ ಸಾವು

Update: 2017-08-16 16:56 GMT

ದಾವಣಗೆರೆ,ಆ.16 : ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಕೂಲಿ ಕಾರ್ಮಿಕನೋರ್ವ ಸ್ಥಳದಲ್ಲೇ ಸಾವುನ್ನಪ್ಪಿರುವ ಘಟನೆ ತಾಲೂಕಿನ ಕೈದಾಳೆ ಗ್ರಾಮದಲ್ಲಿ ಬುಧವಾರ ನಡೆದಿದೆ. 

ಮಲ್ಲಜ್ಜ ಮೃತ ಕೂಲಿ ಕಾರ್ಮಿಕ. ಮಂಗಳವಾರ ರಾತ್ರಿ ಮಳೆ ಬಂದಾಗ ವಿದ್ಯುತ್ ಲೈನ್ ತುಂಡಾಗಿ ಜಮೀನಿನಲ್ಲಿ ಬಿದ್ದಿದೆ.

ಟೊಮ್ಯಾಟೊ ಬಳ್ಳಿಗೆ ಕಟ್ಟಿದ್ದ ತಂತಿಗೆ ವಿದ್ಯುತ್ ಪ್ರವಹಿಸಿ ಮಲ್ಲಜ್ಜ ಸ್ಥಳದಲ್ಲೇ ಮೃತಪಟ್ಟಿದ್ದಾನೆ. 

ಮಲ್ಲಜ್ಜನನ್ನು ಬಿಡಿಸುಕೊಳ್ಳಲು ಹೋದ ಇತರರಿಗೂ ಶಾಕ್ ಹೊಡೆದಿದೆ. ಅದರೆ, ಅದೃಷ್ಟವಶಾತ್ ಇತರರಿಗೆ ಯಾವುದೇ ಪ್ರಾಣ ಹಾನಿ ಆಗಿಲ್ಲ. ಪೆÇಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News