ನೂತನ ಚಾಮುಲ್ ಗೆ ಆಯ್ಕೆ: ಒಕ್ಕೂಟದ ಪಧಾದಿಕಾರಿಗಳಿಗೆ ಅಭಿನಂದನೆ

Update: 2017-08-17 15:45 GMT

ಹನೂರು, ಆ. 17: ಪ್ರಪಂಚದಲ್ಲಿಯೇ ಹಾಲು ಉತ್ಪಾದನೆಯಲ್ಲಿ ಭಾರತ ದೇಶ ಪ್ರಥಮ ಸ್ಥಾನದಲ್ಲಿದ್ದು. ಕ್ಷೀರಕ್ರಾಂತಿ ಪ್ರಾರಂಭದ ನಂತರ ಸಾಕಷ್ಟು ಸಣ್ಣ ಅತೀ ಸಣ್ಣ ರೈತರಿಗೆ ಜನರಿಗೆ ಕೂಲಿ ಕಾರ್ಮಿಕರಿಗೆ ಬಡವರಿಗೆ ಜೀವನ ನೆಡಸಲು ತುಂಬಾ ಅನುಕೂಲ ಹಾಗೂ ಆಧಾರವಾಗಿರುವಂತಹ  ಕ್ಷೇತ್ರ ಹೈನುಗಾರಿಕೆ ಆಗಿದೆ ಎಂದು ಸಂಸದ ಆರ್ ದ್ರುವನಾರಾಯಣ್ ತಿಳಿಸಿದರು.

ಕ್ಷೇತ್ರ ವ್ಯಾಪ್ತಿಯ ಕೇಂದ್ರ ಸಿಂಗನಲ್ಲೂರು ಹಾಲು ಶೀಥಲಿಕರಣ ಕೇಂದ್ರದಲ್ಲಿ ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಕುದೇರು ಹಾಗೂ ಕೊಳ್ಳೇಗಾಲ ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ವತಿಯಿಂದ ನೂತನವಾಗಿ ಚಾಮಲ್‌ಗೆ ಆಯ್ಕೆಯಾದಂತಹ ಒಕ್ಕೂಟದ ಪಧಾದಿಕಾರಿಗಳಿಗೆ ಆಯೋಜಿಸಿದ್ದ ಅಭಿನಂದನೆ ಹಾಗೂ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇವರು ನಮ್ಮ ಜಿಲ್ಲೆಯಲ್ಲಿ ಭೀಕರ ಬರಗಾಲ ಇದ್ದರೂ ಸಹ ರೈತರ ಜೀವನ ಸಾಗಲು ಕೃಷಿಗಿಂತಲೂ ರೈತರು ಹೈನುಗಾರಿಕೆಯನ್ನು ಉಪಕಸಬು ಮಾಡಿ ಇದ್ದನ್ನು ಅವಲಂಬಿತರಾಗಿದ್ದಾರೆ. ಹೈನುಗಾರಿಕೆ ತುಂಬಾ ಲಾಭದಾಯಕವಾಗಿದೆ. ರೈತ ಬೆಳದ ಬೆಳೆಗೆ ನಿರ್ಧಿಷ್ಟ ಬೆಲೆ ದೂರಕದಿದ್ದರೂ ಕೂಡ ಹಾಲಿಗೆ ಪ್ರತೇಕವಾದ ನಿಗದಿತಯಾದ ದರ ಸೀಗುತ್ತದೆ .ಅದ್ದಲ್ಲದೇ ರಾಜ್ಯದಲ್ಲಿ ಯಾವದೇ ಜಿಲ್ಲೆಗಳಿಗಿಂತ ಚಾಮರಾಜನಗರ ಜಿಲ್ಲೆಯಲ್ಲಿಯೇ ಹೆಚ್ಚಿನ ಒಂದು ಲೀಟರ್ 27 ರೂ ನಮ್ಮ ಒಕ್ಕೂಟ ನೀಡುತ್ತಿದ್ದು .ಇದ್ದಕ್ಕೆ ಸರ್ಕಾರ ಅನೇಕ ರೀತಿಯಲ್ಲಿ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ಚಾಮರಾಜನಗರ ಹಾಲು ಒಕ್ಕೂಟ ಪ್ರತೇಕವಾಗಿ ನಿರ್ಮಾಣವಾಗಿದೆ. ಚಾಮುಲ್ ಒಕ್ಕೂಟವನ್ನು ಉತ್ತಮ ರೀತಿಯಲ್ಲಿ ನೆಡೆದು ಕರ್ನಾಟಕದಲ್ಲಿಯೇ ಒಂದು ಮಾದರಿ ಒಕ್ಕೂಟವನ್ನಾಗಿ ನಾವೆಲ್ಲರೂ ಸೇರಿ ಒಗ್ಗೂಡಿ ಮಾಡೋಣ ಎಂದು ತಿಳಿಸಿದರು.

ಚಾಮುಲ್‌ಗೆ ಶೀಘ್ರದಲ್ಲಿಯೇ ಉಳಿದ 54 ಕೋಟಿ ರೂ. ಅನುದಾನ ಬಿಡುಗಡೆ

ಮುಖ್ಯ ಮಂತ್ರಿಗಳು ಉಮ್ಮತೂರಿನಲ್ಲಿ ಕರೆಗಳಿಗೆ ನೀರು ತುಂಬಿಸು ಯೋಜನೆಗೆ ಗುದ್ದಲಿ ಪೂಜೆಗೆ ಆಗಮಿಸಿದ ಸಂದರ್ಭದಲ್ಲಿ ಕುದೇರು ಚಾಮುಲ್ ಒಕ್ಕೂಟ ಕೇಂದ್ರಕ್ಕೆ ಭೇಟಿ ನೀಡಿಸಿ ಅಲ್ಲಿನ ವಾಸ್ತವ ಸ್ಥಿತಿಯನ್ನು ಅವರಿಗೆ ತಿಳಿಸಿದ್ದೇವೆ . ಈಗಾಗಲೇ ಕಟ್ಟಡ ಪೂರ್ಣ ಗೂಂಡಿದ್ದು .ಅಲ್ಲಿಗೆ ಇನ್ನೂ ಹೆಚ್ಚಿನ ಯಂತ್ರೋಪಕರಣಗಳ ಅವ್ಯಶಕತೆ ಇದ್ದು . 54 ಕೋಟಿ ಅನುದಾನ ಬಿಡುಗೆಡೆ ಗೂಳಿಸಿವಂತೆ ಜಿಲ್ಲೆಯ ಎಲ್ಲಾ ಶಾಸಕರು ಒಟ್ಟಾರೆ ಮನವಿ ಮಾಡಿಕೂಂಡಿದ್ದು. ಅದ್ದಲ್ಲದೇ ವಿಧಾನಸಭೆಯಲ್ಲೂ ಸಹ ಅವರ ಆಪ್ತ ಕಾರ್ಯದರ್ಶಿಗಳನ್ನು ಸಹ ಭೇಟಿ ನೀಡಿ ತಕ್ಷಣ ಈ ಅನುದಾನವನ್ನು ಬಿಡುಗಡೆಗೆ ಮಾಡಬೇಕೆಂದು ಒತ್ತಾಹಿಸಲಾಗಿದೆ.    ರಾಹುಲ್‌ಗಾಂಧಿ  ಬೆಂಗಳೂರಿಗೆ ಆಗಮಿಸಿದ ಸಂದರ್ಭದಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಉಳಿದ ಅನುದಾನ ಬಿಡುಗಡೆಗೋಳಿಸುವ ಬಗ್ಗೆ ಒತ್ತಾಹಿಸಿದ್ದು.  ಮುಖ್ಯಮಂತ್ರಿಗಳು ಅದಷ್ಟು ಬೇಗ ಅನುದಾನವನ್ನು ಬೀಡುಗಡೆ ಗೂಳಿಸುವ ಬಗ್ಗೆ ಭರವಸೆ ನೀಡಿದ್ದಾರೆ. 

ಶಾಸಕ ನರೇಂದ್ರ ಮಾತನಾಡಿದರು. ನಂತರ ಆಯ್ಕೆಯಾದಂತಹ ಚಾಮುಲ್‌ನ ನೂತನ ಅದ್ಕಕ್ಷರಾದ ಗುರುಮಲ್ಲಪ್ಪ ಹಾಗೂ ನೀರ್ದೆಶಕರುಗಳಗೆ ಅತ್ಮೀಯವಾಗಿ ಸನ್ಮಾನಿಸ ಗೌರವಿಸಲಾ ಯಿತು.  

ಕಾರ್ಯಕ್ರಮದಲ್ಲಿ ಕೊಳ್ಳೇಗಾಲ ಶಾಸಕ ಜಯಣ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಮಚಂದ್ದು, ಉಪಾಧ್ಯಕ್ಷ ಬಸವರಾಜು, ಸದಸ್ಯರುಗಳಾದ ಶಿವಮ್ಮ, ಮಂಜುಳ, ಮರಗದಮಣಿ, ಜಯಂತಿ ನಾಗರಾಜು, ತಾ.ಪಂ ಸದಸ್ಯ ಜಾವಿದ್ ಅಹಮದ್, ಶಿವಕುಮಾರ್, ಮ.ಬೆಟ್ಟ ಪ್ರಾಧಿಕಾರದ ನಾಮ ನಿರ್ದೇಶಕ ಸದಸ್ಯ ದೇವರಾಜು, ಮಂಗಲ ಪುಟ್ಟರಾಜು, ಚಾಮುಲ್ ನಿರ್ದೇಶಕರುಗಳಾದ ಹೆಚ್‌ಎಸ್ ನಂಜುಂಡಪ್ರಸಾದ್ ಮಾದಪ್ಪ, ನಂಜುಂಡಸ್ವಾಮಿ ಪ್ರಮೋದ, ಮುಕುಂಧವರ್ಮ, ತೋಟೇಶ್ ಇನ್ನಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News