ಮೃತನ ಕುಟುಂಬಕ್ಕೆ 2 ಲಕ್ಷ ಪರಿಹಾರ

Update: 2017-08-18 13:31 GMT

ಚಿಕ್ಕಮಗಳೂರು, ಆ.18: ಅಪಘಾತದಲ್ಲಿ ಮೃತಪಟ್ಟಿದ್ದ ಸಂಸ್ಥೆಯ ಗ್ರಾಹಕನ ಕುಟುಂಬದವರಿಗೆ ಶ್ರೀರಾಮ ಟ್ರಾನ್ಸ್‍ಪೋರ್ಟ್ ವತಿಯಿಂದ 2 ಲಕ್ಷ ರೂ.ಗಳ ಪರಿಹಾರವನ್ನು ಶುಕ್ರವಾರ ನೀಡಲಾಯಿತು.

 ನಗರದ ಐಜಿ ರಸ್ತೆಯ ಶ್ರೀ ರಾಮ ಟ್ರಾನ್ಸ್‍ಪೋರ್ಟ್ ಕಚೇರಿಯಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದ ಸಂಸ್ಥೆಯ ಗ್ರಾಹಕ ಚಂದ್ರಶೇಖರನ ಕುಟುಂಬದವರಿಗೆ ಸಂಸ್ಥೆಯ ಜನರಲ್ ಮ್ಯಾನೇಜರ್ ಸತ್ಯನಾರಾಯಣ ಕಿಣಿ 2 ಲಕ್ಷ ರೂ.ಗಳ ಚೆಕ್ಕನ್ನು ವಿತರಿಸಿದರು.

 ನಂತರ  ಸಂಸ್ಥೆಯ ಜನರಲ್ ಮ್ಯಾನೇಜರ್ ಸತ್ಯನಾರಾಯಣ ಕಿಣಿ ಮಾತನಾಡಿ, ಚಂದ್ರಶೇಖರ ವಾಹನ ಖರೀದಿಸಲು ಸಂಸ್ಥೆಯಿಂದ ಸಾಲ ಪಡೆದುಕೊಂಡಿದ್ದರು. ಸಾಲ ಪಡೆಯುವ ಸಂದರ್ಭದಲ್ಲಿ ಕ್ರೆಡಿಟ್ ಶೀಲ್ಡ್ ವ್ಯವಸ್ಥೆಯನ್ನೂ ಪಡೆದುಕೊಂಡಿದ್ದರು. ಇತ್ತೀಚೆಗೆ ಅವರು ವಾಹನದಲ್ಲಿ ಹೋಗುತ್ತಿದ್ದಾಗ ಅಪಘಾತವಾಗಕ ಸಾವಪ್ಪಿದ್ದರು. ಅವರು ಕ್ರೆಡಿಟ್ ಶೀಲ್ಡ್ ವ್ಯವಸ್ಥೆಯನ್ನು ಪಡೆದುಕೊಂಡಿದ್ದರಿಂದ ಅವರು ಅಪಘಾತದಲ್ಲಿ ಸಾವಪ್ಪಿದ ಕೂಡಲೇ ಅವರ ಸಂಪೂರ್ಣ ಸಾಲವನ್ನು ಮನ್ನಾ ಮಾಡಲಾಗಿದೆ. ಅದರೊಂದಿದೆ ಅವರ ಅವಲಂಬಿತರ ಜೀವನೋಪಾಯಕ್ಕಾಗಿ 2 ಲಕ್ಷ ರೂ.ಗಳನ್ನೂ ಸಂಸ್ಥೆಯಿಂದ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸಂಜಯ್, ಪುಟ್ಟರಾಜು, ಅನಿಲ್ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News