ಹೈನುಗಾರಿಕೆ ರೈತರಿಗೆ ತುಂಬಾ ಅನುಕೂಲ: ಸಂಸದ ಆರ್.ದ್ರುವನಾರಾಯಣ
ಹನೂರು, ಆ.20: ಸಣ್ಣರೈತರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ಬಡವರಿಗೆ ಜೀವನ ನೆಡಸಲು ತುಂಬಾ ಅನುಕೂಲ ಹಾಗೂ ಆಧಾರವಾಗಿರುವ ಕ್ಷೇತ್ರ ಹೈನುಗಾರಿಕೆಯಾಗಿದೆ ಎಂದು ಸಂಸದ ಆರ್.ದ್ರುವ ನಾರಾಯಣ ತಿಳಿಸಿದರು.
ಕ್ಷೇತ್ರ ವ್ಯಾಪ್ತಿಯಕೇಂದ್ರ ಸಿಂಗನಲ್ಲೂರು ಹಾಲು ಶೀಥಲಿಕರಣ ಕೇಂದ್ರದಲ್ಲಿ ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಹಾಗೂ ಕೊಳ್ಳೇಗಾಲ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ವತಿಯಿಂದ ನೂತನವಾಗಿ ಚಾಮಲ್ಗೆ ಆಯ್ಕೆಯಾದಂತಹ ಒಕ್ಕೂಟದ ಪಧಾದಿಕಾರಿಗಳಿಗೆ ಆಯೋಜಿಸಿದ್ದ ಅಭಿನಂದನೆ ಹಾಗೂ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತ ಬೆಳದ ಬೆಳೆಗೆ ನಿರ್ದಿಷ್ಟ ಬೆಲೆ ದೂರಕದಿದ್ದರೂ ಕೂಡ ಹಾಲಿಗೆ ಪ್ರತೇಕವಾದ ನಿಗದಿತ ದರ ಸೀಗುತ್ತದೆ. ಇದಕ್ಕೆ ಸರ್ಕಾರ ಅನೇಕ ರೀತಿಯಲ್ಲಿ ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದು, ಚಾಮರಾಜನಗರ ಹಾಲು ಒಕ್ಕೂಟ ಪ್ರತೇಕವಾಗಿ ನಿರ್ಮಾಣವಾಗಿದೆ. ಚಾಮುಲ್ ಒಕ್ಕೂಟವನ್ನು ಉತ್ತಮ ರೀತಿಯಲ್ಲಿ ನೆಡೆದು ಕರ್ನಾಟಕದಲ್ಲಿಯೇ ಒಂದು ಮಾದರಿ ಒಕ್ಕೂಟವನ್ನಾಗಿ ನಾವೆಲ್ಲರೂ ಸೇರಿ ಒಗ್ಗೂಡಿ ಮಾಡೋಣ ಎಂದರು.
ಈಗಾಗಲೇ ಕಟ್ಟಡ ಪೂರ್ಣಗೂಂಡಿದ್ದು, ಅಲ್ಲಿಗೆ ಇನ್ನೂ ಹೆಚ್ಚಿನ ಯಂತ್ರೋಪಕರಣಗಳ ಅವ್ಯಶಕತೆಯಿದೆ. 54 ಕೋಟಿ ರೂ. ಅನುದಾನ ಬಿಡುಗೆಡೆ ಗೂಳಿಸಿವಂತೆ ಜಿಲ್ಲೆಯ ಎಲ್ಲಾ ಶಾಸಕರು ಒಟ್ಟಾರೆ ಮನವಿ ಮಾಡಿಕೂಂಡಿದ್ದು.ಅಲ್ಲದೆ, ವಿಧಾನಸಭೆಯಲ್ಲೂ ಅವರ ಆಪ್ತ ಕಾರ್ಯದರ್ಶಿಗಳನ್ನು ಸಹ ಭೇಟಿ ನೀಡಿ ತಕ್ಷಣ ಈ ಅನುದಾನವನ್ನು ಬಿಡುಗಡೆಗೆ ಮಾಡಬೇಕೆಂದು ಒತ್ತಾಹಿಸಲಾಗಿದೆ. ರಾಹುಲ್ ಗಾಂಧಿಯವರು ಬೆಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಉಳಿದ ಅನುದಾನ ಬಿಡುಗಡೆಗೊಳಿಸುವ ಬಗ್ಗೆ ಒತ್ತಾಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಶಾಸಕ ನರೇಂದ್ರ ಮಾತನಾಡಿ, ಸಹಕಾರ ಸಂಘಗಳಲ್ಲಿ ರಾಜಕೀಯತರದೆ, ನೂತನ ಒಕ್ಕೂಟದ ಸದಸ್ಯರುಗಳು ಸಹ ಶ್ರಮಿಸಬೇಕಾಗಿದೆ ಎಂದರು.
ಈ ವೇಳೆ ಒಕ್ಕೂಟದ ನೂತನ ಅಧ್ಯಕ್ಷ ಗುರುಮಲ್ಲಪ್ಪ ಹಾಗೂ ನೀರ್ದೆಶಕರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕೊಳ್ಳೇಗಾಲ ಶಾಸಕ ಜಯಣ್ಣ, ಜಿಪಂ ಅಧ್ಯಕ್ಷ ಮಚಂದ್ದು, ಉಪಾಧ್ಯಕ್ಷ ಬಸವರಾಜು, ಸದಸ್ಯರುಗಳಾದ ಶಿವಮ್ಮ, ಮಂಜುಳ, ಮರಗದಮಣಿ, ಜಯಂತಿ ನಾಗರಾಜು, ತಾಪಂ ಸದಸ್ಯಜವಾದ್ ಅಹ್ಮದ್, ಶಿವಕುಮಾರ್, ಮ.ಬೆಟ್ಟ ಪ್ರಾಧಿಕಾರದ ನಾಮ ನಿರ್ದೇಶಕ ಸದಸ್ಯದೇವರಾಜು, ಮಂಗಲ ಪುಟ್ಟರಾಜು, ಚಾಮುಲ್ ನಿರ್ದೇಶಕರುಗಳಾದ ಎಚ್.ಎಸ್ ನಂಜುಂಡ ಪ್ರಸಾದ್ಮಾದಪ್ಪ, ನಂಜುಂಡಸ್ವಾಮಿ ಪ್ರಮೋದ, ಮುಕುಂಧವರ್ಮ, ತೋಟೇಶ್ ಮತ್ತಿತರರಿದ್ದರು.