ಓ ಮೆಣಸೇ..

Update: 2017-08-21 09:14 GMT

 ಚೀನಾಕ್ಕೆ ಯುದ್ಧ ಮಾತ್ರ ಗೊತ್ತು, ಶಾಂತಿಯ ಬಗ್ಗೆ ತಿಳಿದೇ ಇಲ್ಲ - ಬಾಬಾ ರಾಮ್‌ದೇವ್, ಯೋಗಗುರು.
 ಪತಂಜಲಿಯಿಂದ ಅದಕ್ಕಾಗಿ ಯಾವುದಾದರೂ ಔಷಧ ತಯಾರಿಸಿ ಚೀನಾ ಮಾರುಕಟ್ಟೆಗೆ ಇಳಿಸಿ ಬಿಡಿ.

---------------------
  ಹಿತಶತ್ರುಗಳು, ಹೊರಗಿನ ಶತ್ರುಗಳ ಅರಿವಿದೆ - ಡಿ.ಕೆ.ಸುರೇಶ್, ಸಂಸದ
 ತಾವು ಕಾಂಗ್ರೆಸ್‌ನ ಪಾಲಿಗೆ ಯಾವ ಶತ್ರು ಎನ್ನುವುದನ್ನೂ ಹೇಳಿ ಬಿಡಿ.

---------------------
 ನಾವು ಸೂಜಿ ಇದ್ದಂತೆ, ಬಿಜೆಪಿ ಕತ್ತರಿ ಇದ್ದಂತೆ - ಸಿದ್ದರಾಮಯ್ಯ, ಮುಖ್ಯಮಂತ್ರಿ
ನಾವು ನೂಲು ಇದ್ದಂತೆ, ಯಾರೂ ಬೇಕಾದರೂ ನಮ್ಮನ್ನು ಬಳಸಿ ಹೊಲಿಗೆ ಹಾಕಬಹುದು ಎಂದರಂತೆ ಕುಮಾರಸ್ವಾಮಿ.

---------------------
ಮಾಜಿ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ ತಮಗೆ ಸುರಕ್ಷಿತ ಎನಿಸುವ ರಾಷ್ಟ್ರಕ್ಕೆ ಹೋಗಲಿ - ಇಂದ್ರೇಶ್‌ಕುಮಾರ್, ಆರೆಸ್ಸೆಸ್ ನಾಯಕ
ಕ್ರಿಮಿನಲ್‌ಗಳು ದೇಶ ತೊರೆಯುವಂತೆ ಮಾಡಿದರೆ ನಮ್ಮ ದೇಶವೇ ಹೆಚ್ಚು ಸುರಕ್ಷಿತ.

---------------------
ಉಪೇಂದ್ರ ಸಿನೆಮಾದಲ್ಲಿ ಮಾಡಿರುವ ಗಿಮಿಕ್ ರಾಜಕೀಯದಲ್ಲಿ ನಡೆಯುವುದಿಲ್ಲ - ಝಮೀರ್ ಅಹ್ಮದ್, ಶಾಸಕ
ಅಂತಹ ಗಿಮಿಕ್‌ಗಳನ್ನು ಈಗಾಗಲೇ ರಾಜಕಾರಣಿಗಳು ಸಾಕಷ್ಟು ಮಾಡಿ ಮುಗಿಸಿಯಾಗಿದೆ.

---------------------
 ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದೇಶದ ಮತ್ತೊಬ್ಬ ಚಾಣಕ್ಯ - ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್ ಸ್ಥಾಪಕ
 ಚಾಣಕ್ಯ ಕ್ರಿಮಿನಲ್ ಕೃತ್ಯವೆಸಗಿ ಜೈಲು ಸೇರಿದ್ದ ಉದಾಹರಣೆ ಇದೆಯೇ?
---------------------
ಮಕ್ಕಳ ಬಗ್ಗೆ ನನ್ನಷ್ಟು ಸಂವೇದನಾಶೀಲ ಯಾರೂ ಇಲ್ಲ - ಯೋಗಿ ಆದಿತ್ಯನಾಥ್, ಉತ್ತರಪ್ರದೇಶ ಮುಖ್ಯಮಂತ್ರಿ
ತಮಗೆ ಮಕ್ಕಳೆಷ್ಟು ಎನ್ನುವುದನ್ನಾದರೂ ಬಹಿರಂಗಪಡಿಸಿ.

---------------------
 ಭಾರತದಂತಹ ಬೃಹತ್ ರಾಷ್ಟ್ರದಲ್ಲಿ ಗೋರಖ್‌ಪುರದಂತಹ ಘಟನೆಗಳು ಸಂಭವಿಸುವುದು ಸಹಜ - ಅಮಿತ್ ಶಾ,  ಬಿಜೆಪಿ ರಾಷ್ಟ್ರಾಧ್ಯಕ್ಷ
 ನಿಮ್ಮಂಥವರು ಆಳ್ವಿಕೆ ನಡೆಸುತ್ತಿರುವ ದೇಶದಲ್ಲಿ ಇಂತಹ ಮಾತುಗಳು ಸಹಜ.

---------------------
 ನೋಟು ಅಮಾನ್ಯಕ್ಕೆ ಜನರು ತೋರಿದ ಬೆಂಬಲ ನಮ್ಮದು ಎಷ್ಟೊಂದು ಜವಾಬ್ದಾರಿಯುತ ಸಮಾಜ ಎಂಬುದನ್ನು ತೋರಿಸುತ್ತದೆ - ರಾಮನಾಥ್ ಕೋವಿಂದ್, ರಾಷ್ಟ್ರಪತಿ
ಆ ಜವಾಬ್ದಾರಿ ಆಳುವವರಿಗೂ ಬೇಡವೇ?
---------------------
ನನ್ನ ಪಾಲಿಗೆ ಜನರೇ ಜನಾರ್ದನರು -ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
 ಜನಾರ್ದನ ಪೂಜಾರಿಯ ಪಾಲಿಗೆ ಪ್ರಭಾಕರ ಭಟ್ಟರೇ ದೇವೇಗೌಡರಂತೆ.

---------------------
 ಚೀನಾ ಉತ್ಪನ್ನ ಬಹಿಷ್ಕರಿಸಿ -ಶೋಭಾ ಕರಂದ್ಲಾಜೆ, ಸಂಸದೆ
 ಮೊಬೈಲ್ ಫೋನ್ ಬಿಸಾಕಿ ಮತ್ತೆ?
---------------------
 ತುಳುವರು ಅತ್ಯಂತ ಬುದ್ಧಿವಂತರು -ಪ್ರಮೋದ್ ಮಧ್ವರಾಜ್, ಸಚಿವ
 ಹೀಗೆ ಹೇಳಿಯೇ ಅವರಿಗೆ ಮೋಸ ಮಾಡಿದ ನಾಯಕರು ತುಂಬಾ ಇದ್ದಾರೆ.

---------------------
ಹೆದರಲು ಅಮಿತ್ ಶಾ ಏನು ದೆವ್ವವೋ, ಭೂತವೋ? - ಉಮಾಶ್ರೀ, ಸಚಿವೆ
ದೆವ್ವ ಎನ್ನುವುದರ ಬಗ್ಗೆ ಗುಜರಾತ್‌ನಲ್ಲಿ ಕೆಲವರ ಸಹಮತವಿದೆ.

---------------------
ಇತರ ರಾಜಕಾರಣಿಗಳಂತೆ ನಾನು ಕಾರ್ಯಕರ್ತರ ಕೈ ಮುಟ್ಟಿದ ತಕ್ಷಣ ಡೆಟಾಲ್ ಹಾಕಿ ಕೈ ತೊಳೆದುಕೊಳ್ಳುವುದಿಲ್ಲ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
 ಬಹುಶಃ ಮನೆಗೆ ಹೋಗಿ ಸ್ನಾನ ಮಾಡುತ್ತೀರೆಂದು ಕಾಣುತ್ತದೆ.

---------------------
 ಕಾಂಗ್ರೆಸಿಗರಿಗೆ ಅಮಿತ್ ಶಾ ಶಕ್ತಿ ಚುನಾವಣೆಯ ನಂತರ ಗೊತ್ತಾಗಲಿದೆ - ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ
 ತಮ್ಮ ಶಕ್ತಿ ಗೊತ್ತಾಗೋದು ಯಾವಾಗ?
---------------------
 ಅವಿಭಜಿತ ದಕ್ಷಿಣ ಕನ್ನಡ ಶಾಂತಿ, ಸಂಸ್ಕಾರಕ್ಕೆ ಹೆಸರು ಪಡೆದ ಜಿಲ್ಲೆ  - ಬಿ.ಕೆ.ಹರಿಪ್ರಸಾದ್, ರಾಜ್ಯಸಭೆ ಸದಸ್ಯ
 ಸದ್ಯಕ್ಕೆ ಶವ ಸಂಸ್ಕಾರಗಳಿಗೆ ಸುದ್ದಿಯಾಗುತ್ತಿದೆ.

---------------------
 ನಾನು ಎಲ್ಲ ವಿಚಾರದಲ್ಲೂ ದೇವೇಗೌಡ ಮತ್ತು ಕುಮಾರಸ್ವಾಮಿ ಹಾಕಿದ ಗೆರೆ ದಾಟುವುದಿಲ್ಲ -ಎಚ್.ಡಿ.ರೇವಣ್ಣ , ಮಾಜಿ ಸಚಿವ

ಅದಕ್ಕೆಂದು ಮಕ್ಕಳನ್ನು ಬಿಟ್ಟಿದ್ದೀರಲ್ಲ?

---------------------
 ದೇಶಕ್ಕೆ ಇಂಡಿಯಾ ಎನ್ನುವುದಕ್ಕಿಂತ ಭಾರತ ಎಂಬ ಹೆಸರೇ ಸೂಕ್ತ - ಡಾ.ಎಂ.ಚಿದಾನಂದಮೂರ್ತಿ, ಸಂಶೋಧಕ
 ದೇಶಕ್ಕೆ ಹೆಸರಿಡಲು ನಿಮ್ಮಲ್ಲಿ ಯಾರಾದರೂ ಕೇಳಿಕೊಂಡಿದ್ದಾರೆಯೇ?
---------------------
ಬಿಜೆಪಿ ಮುಖಂಡನ ಗೋಶಾಲೆಯಲ್ಲಿ 200 ಗೋವುಗಳ ಸಾವು - ಸುದ್ದಿ

ಇತ್ತೀಚೆಗೆ ಗೋವುಗಳಿಗೆ ಗೋಶಾಲೆಗಳಿಗಿಂತ ಕಸಾಯಿಖಾನೆಯೇ ಹೆಚ್ಚು ನೆಮ್ಮದಿ ಕೊಡುತ್ತಿವೆ.

---------------------
 ರಾಜಕೀಯವಾಗಿ ಕುಮಾರಸ್ವಾಮಿಯನ್ನು ಮುಗಿಸಲು ಯತ್ನ - ಮಾಜಿ ಪ್ರಧಾನಿ ದೇವೇಗೌಡ
 ಯತ್ನ ಮುಂದುವರಿಸಿ. ನಿಮಗೆ ರಾಜ್ಯದ ಜನರ ಪೂರ್ಣ ಬೆಂಬಲವಿದೆ. 

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...