ಟಿಟಿ ಪಂದ್ಯಾವಳಿಯಲ್ಲಿ ಐಡಿಎಸ್ಜಿ ಸರ್ಕಾರಿ ಕಾಲೇಜಿಗೆ ದ್ವಿತೀಯ ಸ್ಥಾನ
ಚಿಕ್ಕಮಗಳೂರು, ಆ.23: ಅಂತರ ಕಾಲೇಜು ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ನಗರದ ಐಡಿಎಸ್ಜಿ ಸರ್ಕಾರಿ ಕಾಲೇಜು ತಂಡ ದ್ವಿತೀಯ ಸ್ಥಾನಗಳಿಸಿದೆ ಎಂದು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಿ.ಯೋಗೀಶ್ ತಿಳಿಸಿದ್ದಾರೆ.
ಶಿಕಾರಿಪುರದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಕುವೆಂಪು ವಿಶ್ವವಿದ್ಯಾಲಯ ಆಶ್ರಯದಲ್ಲಿ ಶಿಕಾರಿಪುರದ ಡಾ||ಜಿ.ಎಸ್. ಶಿವರುದ್ರಪ್ಪ ಸಭಾಂಗಣದಲ್ಲಿ ನಡೆದ ಟೆಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ನಗರದ ಐಡಿಎಸ್ಜಿ ತಂಡ ರನ್ನರ್ ಅಪ್ ಪುರಸ್ಕಾರಕ್ಕೆ ಪಾತ್ರವಾಗಿದೆ. ಎಸ್.ಆರ್.ಜಯಕೀರ್ತಿನಾಯ್ಕ ನೇತೃತ್ವದ ಟಿ.ಟಿ.ತಂಡದಲ್ಲಿ ಎಚ್.ಪಿ.ಭವನ್, ಟೆಲ್ವಿನ್ಕ್ರಸ್ತಾ, ಎಸ್.ಎಸ್. ಸಂಜಯ್ ಮತ್ತು ಎಂ.ಕೆ.ಪವನ್ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಕುವೆಂಪು ವಿ.ವಿ.ಟೆಬಲ್ ಟೆನ್ನಿಸ್ ತಂಡವನ್ನು ಆಯ್ಕೆ ಮಾಡಿದ್ದು, ಐಡಿಎಸ್ಜಿ ಕಾಲೇಜಿನ ಭವನ್ ಮತ್ತು ಸಮಜಯ್ ತಮಿಳುನಾಡು ಕೊಯಮತ್ತೂರಿನ ಅಮರೀತಾ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ದಕ್ಷಿಣಭಾರತ ಅಂತರವಿಶ್ವವಿದ್ಯಾಲಯ ಟೆಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದಾರೆ. ವಿಜೇತ ತಂಡವನ್ನು ಪ್ರಾಂಶುಪಾಲ ಪ್ರೊ.ಟಿ.ಸಿ.ಬಸವರಾಜ್, ದೈಹಿಕ ಶಿಕ್ಷಣ ನಿರ್ದೇಶಕ ಬಿ.ಯೋಗೀಶ್ ಮತ್ತು ಕ್ರೀಡಾ ಸಮಿತಿ ಸದಸ್ಯ ಡಾ||ಕೆ.ಸಿ.ಜಗದೀಶ್ ಅಭಿನಂದಿಸಿದ್ದಾರೆ.