×
Ad

ಉದ್ಯೋಗ ಮೇಳದಲ್ಲಿ ಯುವ ಜನತೆಯ ಸಂಖ್ಯೆ ತೀರ ಕಡಿಮೆ: ಶಾಸಕ ಸುಬ್ಬಾರೆಡ್ಡಿ ವಿಷಾದ

Update: 2017-08-23 20:16 IST

ಬಾಗೇಪಲ್ಲಿ, ಆ.23: ಪ್ರತಿಭಟನೆ ,ಸಂಗೀತ ರಸಮಂಜರಿಯಂತಹ ಕಾರ್ಯಕ್ರಮಗಳಿಗೆ ಯುವ ಜನತೆ ತಂಡೋಪತಂಡವಾಗಿ ಆಗಮಿಸುತ್ತಾರೆ ಆದರೆ ಉಚಿತವಾಗಿ ಉದ್ಯೋಗ ತರಬೇತಿ ನೀಡುವಂತಹ ಉದ್ಯೋಗ ಮೇಳದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರ ಸಂಖ್ಯೆ ತೀರ ಕಡಿಮೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ವಿಷಾದ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಪಂ, ಸೌಂದರ್ಯ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಡಿಡಿಯು, ಜಿಕೆವೈ ಮತ್ತು ಆರ್‍ಜಿಸಿವೈ ಯೋಜನೆಯಡಿಯಲ್ಲಿ ಅಭ್ಯರ್ಥಿ ಹಾಗೂ ಅಭ್ಯರ್ಥಿಯ ಪಾಲಕ/ಪೋಷಕರಿಗೆ ಸಮಾಲೋಚನೆ ಒಗ್ಗೂಡಿಸುವ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,  ಸರ್ಕಾರ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವ ಉದ್ದೇಶದಿಂದ ಅನೇಕ ಸರ್ಕಾರಿ ಸ್ವಾಮ್ಯದ ಕಂಪೆನಿಗಳ ಮೂಲಕ ಉದ್ಯೋಗ ಮೇಳಗಳಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಯುವಕರಲ್ಲಿ ಕೌಶಲ್ಯ ಇಲ್ಲ ಎಂದರೆ ಅವರು ಯಾವುದೇ ರ್ಯಾಂಕ್ ಗಳಿಸಿದರೂ ಸಹ ಪ್ರಯೋಜನವಿಲ್ಲ, ಉತ್ತಮ ವಿದ್ಯಾಭ್ಯಾಸ ಮಾಡಿ ರ್ಯಾಂಕ್ ಪಡೆದವರು ಕೇವಲ ಸಾವಿರಗಳಲ್ಲಿ ವೇತನ ಪಡೆಯುತ್ತಿದ್ದರೆ 10ನೇ ತರಗತಿ ಓದಿರುವವರು ತನ್ನ ಕೌಶಲ್ಯದ ಮೂಲಕ ಲಕ್ಷಗಟ್ಟಲ್ಲೇ ವೇತನ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

 ನಮ್ಮ ಕ್ಷೇತ್ರದಲ್ಲಿ 10ಸಾವಿರಕ್ಕೂ ಅಧಿಕ ನಿರುದ್ಯೋಗಿಗಳಿದ್ದಾರೆ ಆದರೆ ಇಂದು ಆಯೋಜಿಲಾಗಿರುವ ಉದ್ಯೋಗ ಮೇಳದಲ್ಲಿ ಕೇವಲ 300 ಮಂದಿ ಯುವಕ ಯುವತಿಯರು ಮಾತ್ರ ನೋಂದಣಿ ಮಾಡಿರುವುದು ಅತ್ಯಂತ ಬೇಸ ಸಂಗತಿ ಎಂದರು.

ತಾಪಂ ಇಒ ಕೆ.ವಿರೆಡ್ಡಪ್ಪ ಮಾತನಾಡಿ, ಈ ತಾಲೂಕನ್ನು ಬಯಲು ಬಹಿರ್ದೆಸೆ ಮುಕ್ತ ತಾಲೂಕನ್ನಾಗಿ ಮಾಡುವ ಗುರಿಯಿದ್ದು, ಪ್ರತಿಯೊಬ್ಬರೂ ಶೌಚಾಲಯವನ್ನು ನಿರ್ಮಾಣ ಮಾಡಿಕೊಂಡು ಸ್ವಚ್ಛತೆಗೆ ಆದ್ಯತೆ ನೀಡಬೇಕಾಗಿದೆ. ಪ.ಜಾ ಮತ್ತು ಪ.ಪಂ ಜಾತಿಯವರಿಗೆ ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಳ್ಳು ಸರ್ಕಾರ 15ಸಾವಿರ ಗೂ. ಸಹಾಯ ಧನವನ್ನು ನೀಡ ಲಾಗುತ್ತಿದೆ. ಅಲ್ಲದೆ,  ಇತರೇ ವರ್ಗದವರಿಗೆ 12 ಸಾವಿರ ರೂ. ಸಹಾಯಧನವನ್ನು ನೀಡಲಾಗುತ್ತಿದೆ ಎಂದ ಅವರು, ಪ.ಜಾ ಮತ್ತು ಪ.ಪಂ ವರ್ಗದವರು ಶೌಚಾಲಯ ನಿರ್ಮಾಣ ಮಾಡಿಕೊಂಡರೆ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಕೃತ ಬ್ಯಾಂಕ್‍ಗಳು 15 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶೌಚಾಲಯವನ್ನು ನಿರ್ಮಾಣ ಮಾಡಿಕೊಂಡು ರೋಗಮುಕ್ತ ತಾಲೂಕನ್ನಾಗಿ ಮಾಡುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ  ಜಿಪಂ ಸದಸ್ಯ ಲಕ್ಷ್ಮೀನರಸಿಂಹಪ್ಪ, ತಾಪಂ ಅಧ್ಯಕ್ಷ ಕೆ.ಆರ್.ನರೇಂದ್ರಬಾಬು, ಸ್ಥಾಯಿಸಮಿತಿ ಅಧ್ಯಕ್ಷ ಬಿ.ವಿ.ಮಂಜುನಾಥ್, ಎಪಿಎಂಸಿ ಅಧ್ಯಕ್ಷ ನಾರಾಯಣರೆಡ್ಡಿ, ನಿವೃತ್ತ ಬ್ಯಾಂಕ್ ಅಧಿಕಾರಿಗಳಾದ ರಾಮಸ್ವಾಮಿ, ವೆಂಕಟರವಣಪ್ಪ, ನಾರಾಯಣಸ್ವಾಮಿ, ಯಲ್ಲಂಪಲ್ಲಿ ವಿಎಸ್‍ಎಸ್‍ಎನ್ ಅಧ್ಯಕ್ಷ ಯರ್ರಕಿಟ್ಟಪ್ಪ, ಬಿಸಿಎಂ ಇಲಾಖೆಯ ಶಿವಪ್ಪ, ಸಾಕ್ಷರತಾ ಸಮನ್ವಯ ಅಧಿಕಾರಿ ಎನ್.ಶಿವಪ್ಪ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News