ಮನೆಯಿಂದ ಹೊರಗೆ ಬನ್ನಿ ಘೋಷಣೆಯೊಂದಿಗೆ ಎಸ್ಡಿಪಿಐ ಮಾನವ ಸರಪಳಿ
ಚಿಕ್ಕಮಗಳೂರು, ಆ.26:ಮನೆಯಿಂದ ಹೊರಗೆ ಬನ್ನಿ ಎಂಬ ಘೋಷಣೆಯೊಂದಿಗೆ ಎಸ್ಡಿಪಿಐ ಕಾರ್ಯಕರ್ತರು ಕಪ್ಪು ಪಟ್ಟಿ ಕಟ್ಟುವ ಮೂಲ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಅಜಾದ್ ಪಾರ್ಕ್ನಲ್ಲಿ ಮಾನವ ಸರಪಳಿನಿರ್ಮಿಸಿ ಪ್ರತಿಭಟನೆ ನಡೆಸಿದರು.
ಈ ಸಮಯದಲಲಿ ಎಸ್ಡಿಪಿಐ ಜಿಲ್ಲಾ ಧ್ಯಕ್ಷ ಅಜ್ಮತ್ ಪಾಷಾ ಮಾತನಾಡಿ, ದೇಶದ ಬಹಳ ವೇಗವಾಗಿ ಗುಂಪು ಹಿಂಸಾ ಹತ್ಹಗಳು ನಡೆಯುತ್ತಿವೆ. ಗೋರಕ್ಷಕರು ಮತಿಭ್ರಾಂತ ಆದರ್ಶವನ್ನು ಇಟ್ಟುಕೊಂಡು ಅಸಹಾಯಕ ಮುಸ್ಲಿಂ, ದಲಿತ ಮತ್ತು ಇತರೆ ಅಲ್ಪ ಸಂಖ್ಯಾತ ಸಮದಾಯಗಳ ಮೇಲೆ ದಾಳಿ ನಡೆಸಿ ಕೊಲೆಗೈಯುತ್ತಿದ್ದಾರೆ. ಕೇಂದ್ರದಲ್ಲಿ ಮೋದಿ ಮತ್ತು ವಿವಿಧ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳ ರಕ್ಷಣೆಯೊಂದಿಗೆ ಭಯೋತ್ಪಾದಕರು 31 ಮಂದಿ ಮುಸ್ಲಿಮರು ಮತ್ತು 8 ಮಂದಿ ದಲಿತರನ್ನು ಗುಂಪು ಹಿಂಸೆಯ ಮೂಲಕ ಹತ್ಯೆ ನಡೆಸಿದ್ದಾರೆ. ನೂರಾರು ಕುಟುಂಬಗಳನ್ನು ಗೋ ರಾಕ್ಷಸರು ದ್ವಂಸಗೊಳಿಸಿದ್ದಾರೆ ಎಂದು ಆರೋಪಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಹಾಡು ಹಗಲಿನಲ್ಲಿ ಮುಸ್ಲಿಂ ಮತ್ತು ದಲಿತರನ್ನು ಥಳಿಸಿ ಕೊಲ್ಲವ ವಿಡಿಯೋಗಳು. ಅದೇ ರೀತಿ ಅವರನ್ನು ನಗ್ನಗೊಳಿಸಿ ಮೆರವಣಿಗೆ ಮಾಡುತ್ತಾ ಹಲ್ಲೆಗೈಯುವ ವಿಡಿಯೋ ದೃಶ್ಯಗಳು ಇಡೀ ಜಗತ್ತಿನಾದ್ಯಂತ ವೈರಲ್ ಆಗುತ್ತಿದೆ. "ಪವಿತ್ರ ಗೋವು" ಮತ್ತು "ಗೋರಕ್ಷಣೆ" ಎಂಬ ಚುನಾವಣಾ ಅಜೆಂಡಾದೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಸರಕಾರಗಳು ತಮ್ಮವರೇ ಆದ " ಗೋರಕ್ಷಕರ" ಮೇಲೆ ಹೇಗೆ ತಾನೆ ಕಾನೂನು ಕ್ರಮ ಕೈಗೊಳ್ಳಬಲ್ಲದು ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಸರಕಾರ ಇರುವ ರಾಜ್ಯಗಳಲ್ಲಿ ಪೋಲಿಸರು ಆಕ್ರಮಣಕಾರರ ಮೆಲೆ ಕ್ರಮ ಕೈಗೊಳ್ಳುವುದರ ಬದಲಾಗಿ ಆಕ್ರಮಿಸಲ್ಪಟ್ಟವರ ಮೇಲೆ ಮೊಕದ್ದಮೆಯನ್ನು ದಾಖಲಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ತತ್ವ ಸಿದ್ದಾಂತದ ಅಡಿಯಲ್ಲಿ ಕಟ್ಟಿರುವ ಈ ದೇಶದಲ್ಲಿ ಇಂತಹಾ ಅರಾಜಕತೆಯು ಹಿಂದೆಂದೂ ಕಂಡು ಬಂದಿರಲಿಲ್ಲ. ಇಂದು ಭಾರತ ಗಣರಾಜ್ಯವು ರಕ್ತ ಸುರಿಸುತ್ತಿದೆ. ಇಂತಹಾ ಸಂದಿಗ್ಥ ಪರಿಸ್ಥಿತಿಯಲ್ಲಿ ನಾವೆಲ್ಲರೂ ಹೋರಾಟದ ಮೂಲಕ ಗೆಲ್ಲಬೇಕಾಗಿದೆ ಎಂದಿದ್ದಾರೆ.
ಅದ್ದರಿಂದ ಇಂತಹಾ ಮತಿಭ್ರಾಂತ ಭಯೋತ್ಪಕರ ಕಪಿಮುಷ್ಟಿಯಿಂದ ದೇಶವನ್ನು ರಕ್ಷಿಸುವ ಸಲುವಾಗಿ ಶಾಂತಿ ಪ್ರಿಯ ಭಾರತದ ನಾಗರಿಕರೆಲ್ಲರೂ ಮುಂದೆ ಬರಬೇಕಾಗಿದೆ. ಈ ವೈವಿದ್ಯಮಯ ದೇಶದ ಭವಿಷ್ಯವನ್ನು ಉಳಿಸಿಕೊಳ್ಳುವುದಕ್ಕಾಗಿ ಎಷ್ಟೇ ದೊಡ್ಡ ಸವಾಲುಗಳನ್ನು ಎದುರಿಸಲಿಕ್ಕಾಗಿ ನಾವು ಸದಾ ಸಿದ್ಧರಾಗಬೇಕಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಕೌನ್ಸಿಲ್ ಮೆಂಬರ್ ಅಮ್ಜದ್ ಖಾನ್, ಮೋಸಿನ್, ತನ್ವೀರ್ ಆಹಮತ್ ಮತ್ತು ಗೌಸ್ ಮುನೀರ್, ಪಿ.ಎಫ್.ಐ ಜಿಲ್ಲಾ ವಲಯ ಅಧ್ಯಕ್ಷ ಜಾಮೀರ್ ಆಹಮದ್, ಕಾರ್ಯದರ್ಶಿ ಚಾಂದ್ ಪಾಷಾ ಮತ್ತಿತರರಿದ್ದರು.