ಶಿಂಷಾ ನದಿ ಬಲದಂಡ ನಾಲೆಗೆ ನೀರು ಹರಿಸಲು ಒತ್ತಾಯಿಸಿ ಪ್ರತಿಭಟನೆ
Update: 2017-08-26 21:44 IST
ಮದ್ದೂರು, ಆ.26: ಕೆಆರ್ ಎಸ್ ನಿಂದ ಶಿಂಷಾ ನದಿ ಬಲದಂಡ ನಾಲೆಗೆ ನೀರು ಹರಿಸದಿರುವುದನ್ನು ಖಂಡಿಸಿ ರೈತಸಂಘದ ಕಾರ್ಯಕರ್ತರು ತಾಲೂಕಿ ಕೊಪ್ಪ ಗ್ರಾಮದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ರಸ್ತೆತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕೂಡಲೇ ಜಲಾಶಯದಿಂದ ಶಿಂಷಾ ನದಿ ಬಲದಂಡೆ ನಾಲೆಗೆ ನೀರುಹರಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘದ ಮುಖಂಡರಾದ ಕೀಳಘಟ್ಟ ನಂಜುಂಡಯ್ಯ, ಚಂದ್ರು, ವೆಂಕಟೇಶ್, ಶಿವಕುಮಾರ್, ಉಮೇಶ್, ಚಂದ್ರು ಮತ್ತಿತರರಿದ್ದರು.