ಸಾಲ ಬಾಧೆ: ರೈತ ಆತ್ಮಹತ್ಯೆ

Update: 2017-08-26 18:02 GMT

ಕಡೂರು, ಆ. 26: ಸಾಲ ಬಾಧೆ ತಾಳಲಾರದೆ ರೈತನೋರ್ವ ತನ್ನ ಮನೆಯಲ್ಲಿ  ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ರೈತನನ್ನು ಮಲ್ಲೇಶ್ವರ ಗ್ರಾಮದ ಮಂಜುನಾಥ(26) ಎಂದು ಗುರುತಿಸಲಾಗಿದೆ.

ಮೃತ ಮಂಜುನಾಥ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತಿತರ ಸಂಘಗಳಲ್ಲಿ ಹಾಗೂ ಸ್ನೇಹಿತರಿಂದ ಒಟ್ಟು ರೂ. 50 ಸಾವಿರ ರೂ. ಕೈಸಾಲ ಮಾಡಿದ್ದಾರೆ. ಸಕಾಲದಲ್ಲಿ ಬೆಳೆ ಸರಿಯಾಗಿ ಬಾರದೆ ಸಾಲ ಮರುಪಾವತಿ ಕಷ್ಟವಾಗಿದ್ದ ಹಿನ್ನೆಲೆಯಲ್ಲಿ ಮನನೊಂದು ಯಾರು ಇಲ್ಲದ ಸಂದರ್ಭದಲ್ಲಿ ತನ್ನ ಮನೆಯೇ ಆತ್ಮಹತ್ಯೆ ಮಾಡಕೊಂಡಿರುವುದಾಗಿ ಮೃತನ ಕುಟುಂಬಸ್ಥರು ಪೊಲಿಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಕಡೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News