ಮಡಿಕೇರಿ: ಆ.29ರಂದು ಬಕ್ರೀದ್ ಆಚರಣೆ ಕುರಿತು ಉಪನ್ಯಾಸ ಶಿಬಿರ
Update: 2017-08-28 23:40 IST
ಮಡಿಕೇರಿ, ಆ.28: ಅಲ್-ಅಮೀನ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಬಕ್ರೀದ್ ಹಬ್ಬ ಆಚರಣೆಯ ವಿಧಿ ವಿಧಾನಗಳ ಕುರಿತು ಉಪನ್ಯಾಸ ಶಿಬಿರ ಆ.29 ರಂದು ಮಧ್ಯಾಹ್ನ 2ರಿಂದ ಸಂಜೆ 4ರವರೆಗೆ ನಗರದ ಕಾವೇರಿ ಮಿನಿಹಾಲ್ನಲ್ಲಿ ನಡೆಯಲಿದೆ.
ನಗರದ ಬದ್ರಿಯಾ ಮಸೀದಿಯ ಧರ್ಮಗುರು ಅಬು ಸುಫಿಯಾನ್ ಮದನಿ ಉಪನ್ಯಾಸ ನೀಡಲಿದ್ದಾರೆ ಎಂದು ಸಮಿತಿಯ ಪದಾಧಿಕಾರಿ ಎಂ.ಇ.ಮುಹಮ್ಮದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.