×
Ad

ಅಕ್ರಮ ಜಲ್ಲಿ ಕಲ್ಲು ಸಾಗಟ: ಎರಡು ಲಾರಿ ವಶ

Update: 2017-08-29 22:49 IST

ಕುಶಾಲನಗರ, ಆ.29: ಅಕ್ರಮ ಜಲ್ಲಿ ಕಲ್ಲು ಮತ್ತು ಕಲ್ಲಿನ ಪುಡಿ ಸಾಗಿಸುತ್ತಿದ್ದ 2 ಟಿಪ್ಪರ್ ಗಳನ್ನು ಭೂ ವಿಜ್ಞಾನ ಅಧಿಕಾರಿಗಳ ತಂಡ ವಶಕ್ಕೆ ಪಡೆದ ಘಟನೆ ಕುಶಾಲನಗರ ಸಮೀಪದ ಅವರ್ತಿಗ್ರಾಮದಲ್ಲಿ ನಡೆದಿದೆ. 

ಸಮೀಪದ ಆವರ್ತಿ ಗ್ರಾಮದಲ್ಲಿ ಅನಧಿಕೃತವಾಗಿ 2 ಟಿಪ್ಪರ್ ನಲ್ಲಿ 40 ಟನ್ ಜಲ್ಲಿಕಲ್ಲು, ಮತ್ತೊಂದು ಟಿಪ್ಪರ್ ಲಾರಿಯಲ್ಲಿ 20 ಟನ್‍ ಕಲ್ಲಿನ ಪುಡಿಯನ್ನು ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. 

ಈ ಟಿಪ್ಪರ್  ಕುಶಾಲನಗರದ ಗುತ್ತಿಗೆದಾರ ದಿನೇಶ್‍ ಎಂಬವರಿಗೆ ಸೇರಿದ್ದಾಗಿದೆ. ಟಿಪ್ಪರ್‍ ಚಾಲಕರನ್ನು  ಮಂಗಳೂರಿನ ಪುನಿತ್‍ ಕುಮಾರ್ , ಕೂಡಿಗೆಯ ಸುರೇಶ್, ಗುಮ್ಮನಕೊಲ್ಲಿಯ ರಫೀಕ್‍ ಎಂದು ಗುರುತಿಸಲಾಗಿದೆ.

ಭೂ ವಿಜ್ಞಾನ ಅಧಿಕಾರಿ ಪುಷ್ಪರವರು ಬೈಲು ಕುಪ್ಪಪೊಲೀಸ್‍ ಠಾಣಾಗೆ ಒಪ್ಪಿಸಿ ಕ್ರಮ ತೆಗೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News