ಹೊನ್ನಾವರ: ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮ

Update: 2017-08-31 15:01 GMT

ಹೊನ್ನಾವರ, ಆ.31: ತಾಲೂಕಿನ ಕಡತೋಕದ ಜನತಾ ವಿದ್ಯಾಲಯ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ನಾಗರಾಜ ನಾಯಕತೊರ್ಕೆ ಅವರು ಮಾತನಾಡಿ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನಗಳು ಸಾಧನೆಗೈಯುವಂತೆ ಪ್ರೋತ್ಸಾಹ ಹಾಗೂ ಪ್ರೇರಣೆಗಳನ್ನು ನೀಡುತ್ತವೆ. ಆ ನಿಟ್ಟಿನಲ್ಲಿ ಸಾಧಕರನ್ನು ಪ್ರೋತ್ಸಾಹಿಸಿ ಇತರೇ ವಿದ್ಯಾರ್ಥಿಗಳನ್ನು ಸಾಧನೆಗೈಯುವಂತೆ ಹುರಿದುಂಬಿಸುವುದು ಈ ಕಾರ್ಯಕ್ರಮದಉದ್ದೇಶವಾಗಿದೆ ಎಂದರು.

ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಪರಿಪೂರ್ಣರಾಗುವುದರೊಂದಿಗೆ ವ್ಯಕ್ತಿತ್ವ ವಿಕಸನವಾಗುತ್ತದೆಎಂದು ನುಡಿದುಕೇಂದ್ರ ಸರಕಾರದಜನಪರ ಯೋಜನೆಗಳಾದ ಉಜ್ವಲ ಹಾಗೂ ವಿಮಾ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಪಂಚಾಯತ್ ಸದಸ್ಯ ಶಿವಾನಂದ ಹೆಗಡೆ ಮಾತನಾಡಿ, ನಾಗರಾಜ ನಾಯಕತೊರ್ಕೆಯವರು ಪಕ್ಷಾತೀತ ನಾಯಕರು.ಇವರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಎಲ್ಲರಿಗೂ ಆದರ್ಶ ಪ್ರಾಯರಾಗಿದ್ದಾರೆ ಎಂದುರು.

ಈ ವೇಳೆ ಶಾಲಾ ಸಮಿತಿಯ ಅಧ್ಯಕ್ಷ ಪ್ರೊ. ಶಂಭು ಭಟ್ಟ, ಪ್ರಾಂಶುಪಾಲೆ ದುರ್ಗಮ್ಮ ಪಿ.ಎಚ್., ಮುಖ್ಯಾಧ್ಯಾಪಕ್ಷೆ ಉಷಾ ಜಿ. ಭಟ್ಟ ಅವರನ್ನು ಸನ್ಮಾನಿಸುವುದರೊಂದಿಗೆ ಎಸೆಸೆಲ್ಸಿಯಲ್ಲಿ ಸಾಧನೆಗೈ ದರವಿ ಹೆಗಡೆ, ಎಮ್.ಡಿ.ದಿಶಾ ಹಾಗೂ ಪಿಯುಸಿಯಲ್ಲಿ ಸಾಧನೆಗೈದಗಣೇಶ ಮಡಿವಾಳ, ಸೌಮ್ಯ ನಾಯ್ಕಇವರನ್ನುಕಾಣಿಕೆ ನೀಡಿ ಪುರಸ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಎಮ್.ಎಸ್.ಹೆಗಡೆ, ಆಯ್. ವಿ. ಜೋಶಿ,  ಅನುಪಮ ಮಡಿವಾಳ, ಮಹಾಬಲೇಶ್ವರ ಮಡಿವಾಳ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದದುರ್ಗಮ್ಮ ಪಿ.ಎಚ್. ಸ್ವಾಗತಿಸಿದರು.ಶೀಲಾ ಮೇಸ್ತ ನಿರೂಪಿಸಿದರು.ಮುಖ್ಯಾಧ್ಯಾಪಕರಾದ ಉಷಾ ಜಿ. ಭಟ್ಟ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News