ಯಡಿಯೂರಪ್ಪ ಪುತ್ರನ ಕಾರು ಡಿಕ್ಕಿ ಹೊಡೆದು ಯುವಕ ಸಾವು

Update: 2017-09-01 07:28 GMT

 ಶಿಕಾರಿಪುರ, ಸೆ.1: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರ ಪುತ್ರ, ಶಿಕಾರಿಪುರ ಕ್ಷೇತ್ರದ ಶಾಸಕ ರಾಘವೇಂದ್ರ ಪ್ರಯಾಣಿಸುತ್ತಿದ್ದ ಎಸ್‌ಯುವಿ ಕಾರು ಸ್ಥಳೀಯ ಯುವಕನೊಬ್ಬನಿಗೆ ಡಿಕ್ಕಿ ಹೊಡೆದ ರಭಸಕ್ಕೆ ಯುವಕ ಸಾವನ್ನಪ್ಪ್ಟಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

ಮೃತ ಯುವಕನನ್ನು ಜಿಲ್ಲೆಯ ಮಾಧವಪುರ ಗ್ರಾಮದ ಸುರೇಶ್(24) ಎಂದು ಗುರುತಿಸಲಾಗಿದೆ.

ಘಟನೆಯು ಹೊನ್ನಾಳಿ ತಾಲೂಕಿನ ಮಾಧವಪುರ ಕ್ರಾಸಿಂಗ್ ಸಮೀಪ ನಡೆದಿದ್ದು, ಶಾಸಕ ರಾಘವೇಂದ್ರ ಶಿಕಾರಿಪುರದತ್ತ ಪ್ರಯಾಣಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News