ಗಣೇಶ್ ವಿಸರ್ಜನೆ ವೇಳೆ ವ್ಯಕ್ತಿ ನೀರುಪಾಲು

Update: 2017-09-01 10:58 GMT

ಬಾಗಲಕೋಟೆ, ಸೆ.1: ಗಣೇಶ್ ವಿಸರ್ಜನೆ ವೇಳೆ ಕಾಲು ಜಾರಿ‌ ನದಿಯಲ್ಲಿ ಬಿದ್ದು ಒರ್ವ ವ್ಯಕ್ತಿ ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಲಕ್ಷಾನಟ್ಟಿ ಗ್ರಾಮದಲ್ಲಿ ನಡೆದಿದೆ.

ಲಕ್ಷಾನಟ್ಟಿ ಗ್ರಾಮದ ನಿವಾಸಿ ಜ್ಞಾನೇಶ್ ಮಾಳದ (೨೫) ಮೃತ ದುರ್ದೈವಿ.

ಗಣೇಶ್ ವಿಸರ್ಜನೆ ವೇಳೆ ಆಕಸ್ಮಿಕವಾಗಿ ಜಾರಿ ಘಟಪ್ರಭಾ ನದಿಯಲ್ಲಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತ ದೇಹಕ್ಕಾಗಿ ಅಗ್ನಿಶಮಕ ಸಿಬ್ಬಂದಿ ಹಾಗೂ ನುರಿತ ಈಜುಗಾರರಿಂದ ಜ್ಞಾನೇಶರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಈ ಸಂಬಂಧ ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News