ಚಿಕ್ಕಮಗಳೂರು: ವಿದ್ಯುತ್ ಸ್ಪರ್ಶಕ್ಕೆ ಆನೆ ಬಲಿ

Update: 2017-09-05 17:10 GMT

ಚಿಕ್ಕಮಗಳೂರು, ಸೆ.5: ವಿದ್ಯುತ್ ತಂತಿ ಸ್ಪರ್ಶಿಸುವ ಮೂಲಕ ಸುಮಾರು 25 ವರ್ಷಗಳ ಗಂಡಾನೆಯೊಂದು ಮೃತಪಟ್ಟಿರುವ ಘಟನೆ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಹೋಬಳಿಯನಂದಿ ಬಟ್ಟಲು ತಾಂಡ್ಯ ಎಂಬಲ್ಲಿ ಪತ್ತೆಯಾಗಿದೆ.

ಗಂಡಾನೆಯು ಕಾಡಂಚಿನ ಜಮೀನಿನೊಳಗೆ ಪ್ರವೇಶ ಪಡೆದು ಮೃತಪಟ್ಟಿದೆ. ಈ ಆನೆ ಬಿದ್ದಿರುವ ಸಮೀಪದಲ್ಲಿ ವಿದ್ಯುತ್ ತಂತಿ ಹರಿಯುತ್ತಿದ್ದು, ಆನೆಯು ವಿದ್ಯುತ್ ತಮತಿಗೆ ಸಿಲುಕಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ತರೀಕೆರೆ ಮತ್ತು ಲಿಂಗದಹಳ್ಳಿ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News