ಸೆ.16 ರಂದು ನೂತನ ಅಶೋಕ ಟಿವಿ ಉದ್ಘಾಟನೆ

Update: 2017-09-13 14:50 GMT

ಹಾಸನ,ಸೆ.13:  ನೂತನ ಅಶೋಕ ಟಿವಿ ಉದ್ಘಾಟನೆ ಜೊತೆಗೆ ಪರಿಚಯ ಕಾರ್ಯಕ್ರಮವನ್ನು ಸೆಪ್ಟಂಬರ್ 16 ರಂದು ನಗರದ ಸ್ವಾಭಿಮಾನ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮೈಸೂರು ವಿಭಾಗೀಯ ಸಂಚಾಲಕ ಮಲ್ಲೇಶ್ ಅಂಬುಗ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಶನಿವಾರ ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗುವ ಅಶೋಕ ಟಿವಿ ಉದ್ಘಾಟನೆಯನ್ನು ರೆಸಿಡೆನ್ಸ್ ಮಾಂಕ್ ಇನ್ ಲಂಡನ್ ನ ಪೂಜ್ಯ ಬಂತೇ ಧಮ್ಮನಾಗ ನೆರವೇರಿಸಲಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಎನ್.ಆರ್.ಶಿವರಾಂ, ಅಶೋಕ ಟಿವಿ ನಿರ್ದೇಶಕ ಸುರೇಶ್ ಎಸ್.ಕಾನೇಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಜಾನಕಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜ್ಯೋತಿ ವೈಜನಾಥ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀಧರ್, ಅಂತರರಾಷ್ಟ್ರೀಯ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್, ಲೇಖಕಿ ಬಾನು ಮುಸ್ತಾಕ್, ದಲಿತ ಮುಖಂಡ ನಾರಾಯಣ ದಾಸ್, ಕೃಷ್ಣ ಅತ್ನಿ, ಶ್ರೀನಿವಾಸ್ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ದಸಂಸ (ಅಂಬೇಡ್ಕರ್ ವಾದ) ನಾಗರಾಜ್, ಬಿ.ಆರ್.ವಿಜಯ್ ಕುಮಾರ್, ಹರೀಶ್, ಮಂಜುನಾಥ್ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News