×
Ad

ಅತಗೂರು: ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮೃತ್ಯು

Update: 2017-09-13 23:45 IST

ಮದ್ದೂರು, ಸೆ.13: ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದ ಬಾಲಕ ಮತ್ತು ಯುವಕ ಮೃತಪಟ್ಟ ಘಟನೆ ತಾಲೂಕಿನ ಅತಗೂರು ಗ್ರಾಮದಲ್ಲಿ ನಡೆದಿದೆ.
 ಗ್ರಾಮದ ಕಲಾವತಿ ಎಂಬವರ ಪುತ್ರ ಕಿರಣ್ (12) ಹಾಗೂ ನಾಗರಾಜು ಎಂಬವರ ಪುತ್ರ ಚಂದನ್ (21) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮೃತ ಯುವಕ ಮತ್ತು ಬಾಲಕನ ಪೋಷಕರ ಆಕ್ರಂದನ ಮುಗಿಲುಮುಟ್ಟಿತು.

ಈ ಇಬ್ಬರು ತೋಟದಲ್ಲಿ ತರಕಾರಿ ಕೊಯ್ಯಲು ಹೋಗಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದು, ಕೆಸ್ತೂರು ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News