ಉದ್ಘಾಟನೆಗೆ ಮುನ್ನ ಕುಸಿದ ಅಣೆಕಟ್ಟು..!

Update: 2017-09-20 17:54 GMT

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಂದ ಉದ್ಘಾಟನೆಗೊಳ್ಳಲಿದ್ದ 389.31 ಕೋಟಿ. ರೂ. ವೆಚ್ಚದ ಗಾಟೇಶ್ವರ್ ಪಂಥ್ ಕಾಲುವೆ ಯೋಜನೆಯ ಅಣೆಕಟ್ಟು ಬುಧವಾರ ಕುಸಿದಿದ್ದು, ಹಲವು ಪ್ರದೇಶಗಳು ಜಲಾವೃತವಾಗಿವೆ. ಬಿಹಾರ ಸರಕಾರದ ನೀರಾವರಿ ಯೋಜನೆ ಅಡಿಯಲ್ಲಿ ಭಾಗಲ್ಪುರದ ಕಹಾಲ್‌ಗಾಂವ್‌ನಲ್ಲಿ ಗಾಟೇಶ್ವರ್ ಗಂಗಾ ಪಂಪ್ ಕಾಲುವೆ ಯೋಜನೆ ಕಾಮಗಾರಿ ನಡೆಸಿತ್ತು. 11 ಕಿ.ಮೀ. ಉದ್ದದ ಈ ಯೋಜನೆಗೆ 389.31 ಕೋಟಿ ರೂ. ವೆಚ್ಚವಾಗಿತ್ತು. ಈ ಯೋಜನೆ ಅತ್ಯಂತ ಹಳೆಯದು. ಇದು ಪೂರ್ಣಗೊಳ್ಳಲು 40 ವರ್ಷಗಳೇ ಹಿಡಿದಿದ್ದವು!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor