ಶರತ್ ಕೊಲೆ ಪ್ರಕರಣದ ಮೂವರು ಆರೋಪಿಗಳಿಗೆ ಪೊಲೀಸ್ ಕಸ್ಟಡಿ

Update: 2017-09-23 08:55 GMT

ಬೆಂಗಳೂರು, ಸೆ.23: ಆದಾಯ ತೆರಿಗೆ ಇಲಾಖೆ ಅಧಿಕಾರಿ ವಿ.ನಿರಂಜನ್‌ಕುಮಾರ್ ಅವರ ಪುತ್ರ ಶರತ್ ನನ್ನು ಅಪಹರಿಸಿ ಕೊಲೆಗೈದ ಪ್ರಕರಣದ ಆರೋಪಿಗಳಾದ ಬೆಂಗಳೂರಿನ ಉಲ್ಲಾಳದ ಎಚ್‌.ಪಿ.ವಿಶಾಲ್ ಅಲಿಯಾಸ್ ವಿಶು (21), ತಾವರೆಕೆರೆಯ ವಿನಯ್‌ಪ್ರಸಾದ್ ಅಲಿಯಾಸ್ ವಿಕ್ಕಿ (24), ಕರಣ್ ಪೈ ಅಲಿಯಾಸ್ ಕರ್ಣ (22)  ಎಂಬವರಿಗೆ ನ್ಯಾಯಾಲಯ ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಆರೋಪಿಗಳನ್ನು ಜ್ಞಾನಭಾರತಿ ಪೊಲೀಸ್ ಠಾಣೆಯ ಪೊಲೀಸರು ಶುಕ್ರವಾರ ಬಂಧಿಸಿ ಏಳನೆ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ಪ್ರಕರಣದ ಹೆಚ್ಚಿನ ವಿಚಾರಣೆಗಾಗಿ  ಇಂದು ಪೊಲೀಸರ ವಶಕ್ಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News