ಕುಮಾರಸ್ವಾಮಿಯ ಆರೋಗ್ಯ ಸುಧಾರಣೆ: ದೇವೇಗೌಡ

Update: 2017-09-25 13:38 GMT

ಬೆಂಗಳೂರು, ಸೆ. 25: ತೆರೆದ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಮಾಜಿ ಸಿಎಂ ಕುಮಾರಸ್ವಾಮಿ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗಿದ್ದು, ಇಂದು ಅಥವಾ ನಾಳೆ ವಾರ್ಡ್‌ಗೆ ಶಿಫ್ಟ್ ಆಗಲಿದ್ದಾರೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ಸೋಮವಾರ ಇಲ್ಲಿನ ಬನ್ನೇರುಘಟ್ಟದಲ್ಲಿರುವ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ ಕುಮಾರಸ್ವಾಮಿ ಅವರ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಗೆ ಶಸ್ತ್ರಚಿಕಿತ್ಸೆ ನಡೆದು 48 ಗಂಟೆ ಕಳೆದಿದೆ. ನಿಧಾನವಾಗಿ ನಡೆಯಲಾರಂಭಿಸಿದ್ದು, ದ್ರವ ರೂಪದ ಆಹಾರ ಸೇವನೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಆಸ್ಪತ್ರೆಯ ವೈದ್ಯರು ಪ್ರತೀ ಗಂಟೆಗೊಮ್ಮೆ ಅವರ ಆರೋಗ್ಯ ಪರೀಕ್ಷೆ ನಡೆಯುಸುತ್ತಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಯೋಗಕ್ಷೇಮ ವಿಚಾರಿಸಲು ಯಾರೂ ಆಸ್ಪತ್ರೆಗೆ ಬರಬಾರದು ಎಂದು ವಿನಂತಿಸಿಕೊಂಡ ಅವರು, ಆರೋಗ್ಯ ತುಂಬಾ ಸುಧಾರಣೆ ಆಗುತ್ತಿದೆ. ಇದೀಗ ಚೆನ್ನಾಗಿ ಮಾತನಾಡಿಸಿದ್ದಾರೆಂದು ಪತ್ನಿ ಅನಿತಾ ಕುಮಾರಸ್ವಾಮಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News