ದೇವಾಲಯದಲ್ಲಿ ಕಾಣಿಕೆ ಹುಂಡಿ ಕಳವು

Update: 2017-09-25 18:26 GMT

ಶಿವಮೊಗ್ಗ, ಸೆ. 25: ದೇವಾಲಯದಲ್ಲಿ ಕಾಣಿಕೆ ಹುಂಡಿಯ ಜೊತೆಗೆ ಆವರಣದೊಳಗೆ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾ, ಹಾರ್ಡ್ ಡಿಸ್ಕ್‍ನ್ನು ಕೂಡ ಕಳ್ಳರು ಹೊತ್ತೊಯ್ದಿರುವ ಘಟನೆ ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದಲ್ಲಿ ವರದಿಯಾಗಿದೆ. 

ಗ್ರಾಮದ ಹೊರವಲಯದಲ್ಲಿರುವ ಉದ್ಭವ ಬಸವೇಶ್ವರ ದೇವಾಲಯದಲ್ಲಿ ಈ ಘಟನೆ ನಡೆದಿದೆ.

ಹುಂಡಿಯಲ್ಲಿದ್ದ ಹಣ ತೆಗೆದುಕೊಂಡು ಅದನ್ನು ಸಮೀಪದ ಕೆರೆಯ ಬಳಿ ಕಳ್ಳರು ಎಸೆದು ಹೋಗಿದ್ದಾರೆ. ಹುಂಡಿಯಲ್ಲಿ ಸುಮಾರು 80 ಸಾವಿರ ರೂ.ಗಳಿತ್ತು ಎಂದು ಅಂದಾಜಿಸಲಾಗಿದೆ. 

ದೇವಾಲಯಕ್ಕೆ ಇತ್ತೀಚಿನ ಹೆಚ್ಚಿನ ಕಾಣಿಕೆ ಸಂಗ್ರಹವಾಗುತ್ತಿದ್ದ ಕಾರಣದಿಂದ ದೇವಾಲಯ ಸಮಿತಿಯು ದೇವಾಲಯ ಆವರಣದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಿತ್ತು. ಆದರೆ ಕಳ್ಳರು ತಮ್ಮ ಕೃತ್ಯ ಗೊತ್ತಾಗಬಾರದೆಂಬ ಕಾರಣದಿಂದ ಸಿಸಿ ಕ್ಯಾಮರಾ, ಹಾರ್ಡ್ ಡಿಸ್ಕ್‍ನ್ನು ಕೂಡ ಅಪಹರಿಸಿದ್ದಾರೆ.

ಈ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News