ಓ ಮೆಣಸೇ

Update: 2017-10-16 05:21 GMT

ಹಿಂದುತ್ವ ಎನ್ನುವುದು ಭಾರತದ ಸಾಂಸ್ಕೃತಿಕ ಹೆಗ್ಗುರುತು - ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ

ನಕಲಿ ಗೋರಕ್ಷಕರು ಬೀದಿಗಳಲ್ಲಿ ಕತ್ತಿ ತಲವಾರುಗಳ ಜೊತೆಗೆ ಆ ಗುರುತನ್ನು ಅಳಿಸಲು ಹೊರಟಿದ್ದಾರೆ.

--------------------

ರಾಜಕೀಯದಲ್ಲಿ ಧರ್ಮವಿರಬೇಕೇ ಹೊರತು, ಧರ್ಮದಲ್ಲಿ ರಾಜಕೀಯ ಬೆರೆಸಬಾರದು. -ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ನಾಯಕ

ಧರ್ಮದಲ್ಲೂ, ರಾಜಕೀಯದಲ್ಲೂ ವಿಷ ಬೆರೆಸುವ ನಿಮ್ಮಂಥವರ ಬಗ್ಗೆ ಜನರಿಗೆ ಭಯವಿದೆ.

---------------------

ಮಾಜಿ ಪ್ರಧಾನಿ ದೇವೇಗೌಡರನ್ನು ಬಿಟ್ಟು ಬೇರೆ ಯಾರಿಗೂ ನನ್ನನ್ನು ಟೀಕಿಸುವ ಅಧಿಕಾರವಿಲ್ಲ. -ಝಮೀರ್ ಅಹ್ಮದ್, ಶಾಸಕ

ಕಾಂಗ್ರೆಸ್ ಸೇರಿದ ಬೆನ್ನಿಗೇ ಕಾಂಗ್ರೆಸ್‌ನ ವರಿಷ್ಠರಿಗೆ ಸವಾಲೇ?

---------------------

ಸಿಎಂ ಸಿದ್ದರಾಮಯ್ಯರಿಗೆ ವಿನಾಶಕಾಲೇ ವಿಪರೀತ ಬುದ್ಧಿ. -ಯಡಿಯೂರಪ್ಪ, ಮಾಜಿ ಸಿಎಂ

ಬುದ್ಧಿ ವಿಪರೀತ ಇರುವುದು ಒಳ್ಳೆಯ ವಿಷಯವೇ ಆಗಿದೆ.

---------------------

ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಿನವರು ಗೋಭಕ್ಷಕರು. -ಸಿ.ಟಿ. ರವಿ, ಶಾಸಕ

ವರ್ಷಗಳ ಕಾಲ ಆಸ್ಪತ್ರೆಯಲ್ಲ್ಲಿ ಕಳೆದ ಸದಾನಂದ ಗೌಡರನ್ನು ಹೀಗೆ ವ್ಯಂಗ್ಯ ಮಾಡುವುದೇ?

---------------------

ಸಿಎಂ ಸಿದ್ದರಾಮಯ್ಯರನ್ನು ಸೋಲಿಸುವುದೇ ನನ್ನ ಮುಂದಿನ ಗುರಿ. -ಶ್ರೀನಿವಾಸ ಪ್ರಸಾದ್, ಮಾಜಿ ಸಚಿವ

ಒಟ್ಟು ಸೊಸೆಗೆ ಪಾಠ ಕಲಿಸಲು ಮಗನನ್ನು ಸಾಯಿಸುವುದಕ್ಕೂ ತಾವು ಸಿದ್ಧರು.

---------------------

ಕಮ್ಯುನಿಸ್ಟರ ಸ್ವಭಾವದಲ್ಲೇ ರಾಜಕೀಯ ಹಿಂಸಾಚಾರ ಇದೆ. -ಅಮಿತ್ ಶಾ, ಬಿಜೆಪಿ ಅಧ್ಯಕ್ಷ

ಗಾಂಧಿಯನ್ನು ಕೊಂದದ್ದು ಕಮ್ಯುನಿಸ್ಟರೇ?

---------------------

ದೇಶದ ರಕ್ಷಣೆಗಾಗಿ ಪ್ರತಿಯೊಬ್ಬರೂ ಮನೆಯಲ್ಲಿ ಕತ್ತಿ-ತಲ್ವಾರ್ ಇಟ್ಟುಕೊಳ್ಳಬೇಕು. -ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆಯ ಮುಖಂಡ

ದೇಶ ರಕ್ಷಣೆಗಲ್ಲವಾದರೂ, ನಿಮ್ಮಂತಹವರಿಂದ ರಕ್ಷಣೆ ಪಡೆಯಲು ಕತ್ತಿ, ತಲವಾರು ಅತ್ಯಗತ್ಯ ಎನ್ನುವ ಸ್ಥಿತಿಯನ್ನು ಪೊಲೀಸರು ನಿರ್ಮಾಣ ಮಾಡುತ್ತಿದ್ದಾರೆ. 

---------------------

ಲೆಕ್ಕ ಪುಸ್ತಕ ಎರಡೆರಡಿದ್ದರೆ ಅಭಿವೃದ್ಧಿ ಅಸಾಧ್ಯ. -ಅರುಣ್ ಜೇಟ್ಲಿ, ಕೇಂದ್ರ ಸಚಿವ

ಆದರೆ ಅಮಿತ್ ಶಾ ಪುತ್ರ ಅದನ್ನು ಸಾಧ್ಯ ಮಾಡಿದ್ದಾರೆ.

---------------------

ಪ್ರಮೋದ್ ಮುತಾಲಿಕ್ ಒಬ್ಬ ದಾರಿಹೋಕ. -ರಮಾನಾಥ ರೈ, ಸಚಿವ

ನಾಡಿನ ಪಾಲಿಗೆ ಮಾರಿ ಹೋಕ.

---------------------

ಕಾಂಗ್ರೆಸ್ ಅಧ್ಯಕ್ಷರಾಗಲು ತಾಯಿ-ಮಗ (ಸೋನಿಯಾ, ರಾಹುಲ್) ಮಾತ್ರ ಅರ್ಹರು. -ಮಣಿ ಶಂಕರ್ ಅಯ್ಯರ್, ಕಾಂಗ್ರೆಸ್ ನಾಯಕ

ಪ್ರಧಾನಿಯಾಗಲು ಯಾರು ಅರ್ಹರು ಎನ್ನುವುದನ್ನೂ ಬಾಯಿ ಬಿಡಬಾರದೇ?

---------------------

ಪಕ್ಷ ಸಂಘಟನೆ ಕಡೆಗಣಿಸುವವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡುವುದಿಲ್ಲ. -ದೇವೇಗೌಡ, ಮಾಜಿ ಪ್ರಧಾನಿ

ಹಾಗಾದರೆ ಸೂಟ್‌ಕೇಸ್ ಕೊಟ್ಟವರಿಗಷ್ಟೇ ಟಿಕೆಟ್ ಎಂದಾಯಿತು.

---------------------

ಉಗಿದು ಓಡುವಲ್ಲಿ ಕಾಂಗ್ರೆಸ್ ನಿಪುಣ. -ಅನಂತಕುಮಾರ್, ಕೇಂದ್ರ ಸಚಿವ

ಜನರು ನಿಮ್ಮನ್ನು ಹುಗಿದು ಬಿಡುವ ಮುನ್ನ ಓಡಿ ಬಿಡಿ.

---------------------

ಕನ್ನಡದಲ್ಲಿ ಮಂತ್ರ ಪಠಿಸಿದರೆ ದೇವರು ಸಿಟ್ಟಾಗುವುದಿಲ್ಲ. -ಮುಖ್ಯಮಂತ್ರಿ ಚಂದ್ರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ

ಜನರಿಗೆ ಮಂತ್ರ ಅರ್ಥವಾದರೆ ದೇವರ ಬೆಲೆ ಎಲ್ಲಿ ಉಳಿಯಿತು?

---------------------

ನಮ್ಮದು ನುಡಿದಂತೆ ನಡೆದ ಸರಕಾರ. -ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ

ಹಾಗೆಂದು ಕೆರೆಗಳನ್ನು ಬೆಂಗಳೂರು ರಸ್ತೆಗಳ ಮಧ್ಯೆ ತೆಗೆಯುವುದೇ?

---------------------

ಗಾಂಧಿ ಹತ್ಯೆಯಿಂದ ರಾಜಕೀಯವಾಗಿ ಲಾಭವಾಗಿದ್ದರೆ ಅದು ಕಾಂಗ್ರೆಸ್‌ಗೆ ಮಾತ್ರ. -ಉಮಾಭಾರತಿ, ಕೇಂದ್ರ ಸಚಿವೆ

ಕೊಂದ ಬಳಿಕ ನಿಮಗೆ ಅದು ಅರಿವಾಯಿತೇ?

---------------------

ಆರೆಸ್ಸೆಸ್‌ನಲ್ಲಿ ಮಹಿಳೆಯರ ಕಡೆಗಣನೆಯಾಗುತ್ತಿದೆ. -ರಾಹುಲ್‌ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ

ಮಹಿಳೆಯರು ಆರೆಸ್ಸೆಸ್ ಸೇರದೇ ಇರುವುದು ನಿಮ್ಮ ಚಿಂತೆಯೇ?

---------------------

ನಾವು ದೇಶಕ್ಕೆ ಮಾತನಾಡುವ ಪ್ರಧಾನಿಯನ್ನು ಕೊಟ್ಟಿದ್ದೇವೆ. -ಅಮಿತ್ ಶಾ, ಬಿಜೆಪಿ ಅಧ್ಯಕ್ಷ

ಮಾತನಾಡುವ ಗೊಂಬೆ.

---------------------

ಗೌರಿ ಲಂಕೇಶ್ ಹತ್ಯೆ ಕುರಿತು ಸುಳಿವು ಸಿಕ್ಕಿದೆ. -ರಾಮಲಿಂಗಾರೆಡ್ಡಿ, ಸಚಿವ

ಇನ್ನೂ ಗೌರಿ ಹತ್ಯೆಯಾಗಿರುವ ಸುಳಿವಿನ ಬಗ್ಗೆಯೇ ಹೇಳುತ್ತಿದ್ದೀರಿ. ಹತ್ಯೆ ಮಾಡಿದವರ ಸುಳಿವಿನ ಗತಿಯೇನು?

---------------------

ಪ್ರಧಾನಿ ಮೋದಿ 2030ಕ್ಕೆ ಚಂದ್ರನನ್ನೇ ಭೂಮಿಗೆ ತರುತ್ತಾರೆ. - ರಾಹುಲ್‌ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ

ಭೂಮಿಗೆ ತಂದರೆ ನೀವು ಆರಾಮವಾಗಿ ಅದರಲ್ಲಿ ಫುಟ್ ಬಾಲ್ ಆಡುತ್ತಾ ಕಾಲ ಕಳೆಯಬಹುದು.

---------------------

ದಿನಗಳು ಉರುಳಿದಂತೆ ಬಿಗ್‌ಬಾಸ್‌ನ ಆಕರ್ಷಣೆ ಹೆಚ್ಚುತ್ತಾ ಹೋಗುತ್ತಿದೆ. - ಸುದೀಪ್, ನಟ

ಆಕರ್ಷಣೆಗಾಗಿ ತಾನೆ ಕ್ಯಾಮರಾಗಳು ಬಿಸಿ ಬಿಸಿ ದೃಶ್ಯಗಳನ್ನು ಹೊರಬಿಡುತ್ತಿರುವುದು.

---------------------

‘ನಮೋ’ ಎಂದರೆ ನಂಬಿಕೆಗೆ ಮೋಸ. -ರಮಾನಾಥ ರೈ, ಸಚಿವ

ನಂಬಿಕೆಗೆ ಮೋಸ ರಾಜಕಾರಣಿಗಳ ಜನ್ಮಸಿದ್ಧ ಹಕ್ಕು.

---------------------

ಹಿಂದೂ ಹಬ್ಬಗಳನ್ನು ಗುರಿಯಾಗಿಸಿ ಪಟಾಕಿ ನಿಷೇಧ ಮಾಡಲಾಗಿದೆ. -ಬಾಬಾ ರಾಮ್‌ದೇವ್, ಯೋಗಗುರು

ಪತಂಜಲಿ ಪಟಾಕಿ ಉತ್ಪಾದನೆಯ ಯೋಜನೆ ಇದೆಯೇ?

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...