ಅಂಗವಿಕಲರು ಸಮಾಜದಲ್ಲಿ ಏಳಿಗೆ ಹೊಂದಬೇಕು: ಶಾಸಕ ಎಸ್. ಜಯಣ್ಣ

Update: 2017-10-17 18:43 GMT

ಕೊಳ್ಳೇಗಾಲ, ಅ.16: ಸರ್ಕಾರದ ಸವಲತ್ತುಗಳನ್ನು ಪಡೆಯುವ ಮೂಲಕ ಅಂಗವಿಕಲರು ಸಮಾಜದಲ್ಲಿ ಏಳಿಗೆ ಹೊಂದಬೇಕು ಎಂದು ಶಾಸಕ ಎಸ್. ಜಯಣ್ಣ ಅವರು ತಿಳಿಸಿದರು.

ಪಟ್ಟಣದ ಸಿಡಿಎಸ್ ಭವನದಲ್ಲಿ ಮಂಗಳವಾರ ಶೆ.3ರ ಅನುದಾನದಲ್ಲಿ ಅಂಗವಿಕಲರಿಗೆ ಸ್ಕೂಟರ್ ನೀಡಿ ನಂತರ ಅವರು ಮಾತನಾಡಿದರು.

ಅಂಗವಿಕಲರು ಸಮಾಜದಲ್ಲಿ ಎಲ್ಲರಂತೆ ಸಮಾನವಾಗಿ ಜೀವನ ನಡೆಸುವ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಸೌಲಭ್ಯವನ್ನು ನೀಡಿದೆ. ಅದರ ಪ್ರಯೋಜವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು. 

ಈ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷ ಶಾಂತರಾಜು, ಉಪಾಧ್ಯಕ್ಷ ನಂಜುಂಡ, ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷ, ಸದಸ್ಯರುಗಳಾದ ಮಂಗಳಗೌರಿ, ಪರಮೇಶ್ವರಯ್ಯ, ಸುಬ್ರಮಣ್ಯ, ಮಲ್ಲಿಕಾರ್ಜುನ, ರಮೇಶ್, ಶಿವಾನಂದ, ಪೌರಾಯುಕ್ತ ಲಿಂಗರಾಜು ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News