'ಮನೆ ಮನೆಗೆ ಕಾಂಗ್ರೆಸ್' ಅಭಿಯಾನಕ್ಕೆ ವ್ಯಾಪಕ ಜನ ಬೆಂಬಲ: ಶಾಸಕ ಪುಟ್ಟರಂಗ ಶೆಟ್ಟಿ

Update: 2017-10-21 18:25 GMT

ಚಾಮರಾಜನಗರ, ಅ.21: ತನ್ನ ಕ್ಷೇತ್ರದ ಕೆಲವು ಗ್ರಾಮಗಳಲ್ಲಿ ಸಮಸ್ಯೆಗಳಿರುವುರಿಂದ ತಾನೇ ಖುದ್ದು ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದ ಮೂಲಕ ತೆರಳಿ ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದ್ದಾರೆ.

ಚಾಮರಾಜನಗರ ತಾಲೂಕಿನ ಭೋಗಾಪುರ ಗ್ರಾಪಂ ವ್ಯಾಪ್ತಿಯ ಕೆಲ್ಲಂಬಳ್ಳಿ, ಕೆ.ಬಸವನಪುರ, ಸಪ್ಪಯ್ಯನಪುರ, ಹನಹಳ್ಳಿ ಗ್ರಾಮಗಳ ಮನೆಮನೆಗಳಿಗೆ ತೆರಳಿದ ಸಂದರ್ಭದಲ್ಲಿ ಮಾತನಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ, ಜನರು ಸಮಸ್ಯೆಗಳನ್ನು ತಿಳಿಸಿದಂತೆ ತಾವು ಜನರ ಕೆಲಸಗಳನ್ನು ಮಾಡುತ್ತಿದ್ದೇವೆ. ಸರಕಾರದಿಂದ ಬರುವ ಅನುದಾನಗಳನ್ನು ಸದ್ಬಳಕೆ ಮಾಡುವಲ್ಲಿ ಶ್ರಮಿಸಲಾಗುತ್ತಿದೆ. ಇದು ಮುಂದಿನ ಚುನಾವಣೆಗೆ ಸಹಕಾರಿಯಾಗಲಿದೆ ಎಂದ ಶಾಸಕ ಪುಟ್ಟರಂಗಶೆಟ್ಟಿ, ಈಗಾಗಲೇ ಜನರು ಈ ಕಾರ್ಯಕ್ರಮಕ್ಕೆ ಸಹಕರಿಸುತ್ತಿರುವುದು ಸರಕಾರದ ಕಾರ್ಯಕ್ರಮಗಳು ಗ್ರಾಮಗ್ರಾಮಗಳಿಗೂ ತಲುಪಿರುವುದಕ್ಕೆ ಸಾಕ್ಷಿ ಎಂದರು.

ಕಾಂಗ್ರೆಸ್ ಪಕ್ಷ ತನ್ನ ಅಧಿಕಾರದ ಅವಧಿಯಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ 165 ಆಶ್ವಾಸನೆಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೆರವೇರಿಸಲಾಗಿದೆ. ಅದರಂತೆ ಸರಕಾರದ ಸಾಧನೆಗಳನ್ನು ಪಟ್ಟಿ ಮಾಡಿ ಪುಸ್ತಕಗಳನ್ನು ತಯಾರು ಮಾಡಿ ಜನಸಾಮಾನ್ಯರಿಗೆ ನೀಡಲಾಗುತ್ತಿದೆ. ಇದಕ್ಕೆ ಜನ ಬೆಂಬಲವೂ ದೊರಕುತ್ತಿದೆ. ಮುಂದಿನ ಅವಧಿಗೂ ಸರಕಾರವನ್ನು ಜನತೆ ಬೆಂಬಲಿಸಬೇಕೆಂದರು.ಇದೇ ಸಂದರ್ಭದಲ್ಲಿ ಮಳೆಗೆ ಹಾನಿಯಾಗಿರುವ ಮನೆಗಳಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದರು. ತಮ್ಮ ಕ್ಷೇತ್ರದ ಭೋಗಪುರ, ಕೆ.ಬಸವನಪುರ, ಸಪ್ಪಯ್ಯನಪುರ ಹನಹಳ್ಳಿ ಗ್ರಾಮಗಳಲ್ಲಿ ಮಳೆಯಿಂದ ಮನೆ ಗೋಡೆ ಕುಸಿದಿರುವ ಮನೆಗಳಿಗೆ ಭೇಟಿ ನೀಡಿ ನಿರಾಶ್ರೀತರಿಗೆ ಪರಿಹಾರ ಕೊಡಿಸುವುದಾಗಿ ಹಾಗೂ ಬಡವರಿಗೆ ಮನೆಗಳನ್ನು ಕೊಡಿಸುವ ಭರವಸೆ ನೀಡಿದರು.

ಇದೇ ವೇಳೆ ಸಪ್ಪಯ್ಯನಪುರ ಗ್ರಾಮಸ್ಥರು ಸಮುದಾಯ ಭವನ ಹಾಗೂ ರಸ್ತೆ ನಿರ್ಮಾಣಕ್ಕೆ ಶಾಸಕರಿಗೆ ಮನವಿ ಸಲ್ಲಿಸಿದರು. ಇದ್ದಕ್ಕೆ ಸ್ಪಂದಿಸಿದ ಶಾಸಕರು ಶೀಘ್ರ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ವೀಕ್ಷಕಿ ಪುಷ್ಪಾಅಮರ್‌ನಾಥ್, ಚೂಡಾಧ್ಯಕ್ಷ ಸುಹೈಲ್ ಅಲಿಖಾನ್, ಉಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನ್ನಾ ಅಝ್ಗ್ಗರ್, ಮಾಜಿ ಚೂಡಾ ಅದ್ಯಕ್ಷ ಸೈಯದ್ ರಫೀ, ಗ್ರಾಪಂ ಅಧ್ಯಕ್ಷ ಸಿದ್ದರಾಜು, ಜಯಮ್ಮ, ಮಲ್ಲಾಜಮ್ಮ, ಲತಾ ಜಯಣ್ಣ, ಕೆಲ್ಲಂಬಳ್ಳಿ ಶ್ರೀನಿವಾಸ ನಾಯಕ, ಸುಬ್ಬೇಗೌಡ, ಎಪಿಎಂಸಿ ಸದಸ್ಯ ನಾಗೇಂದ್ರ, ಸೋಮಶೇಖರ್, ತಾಪಂ ಮಾಜಿ ಸದಸ್ಯ ಮಹಾಲಿಂಗು, ಅಬ್ರಹಾಂ, ಆಯುಬ್‌ಖಾನ್, ಶ್ರೀಕಾಂತ್, ವೀರಭಧ್ರಸ್ವಾಮಿ, ನಾಗಯ್ಯ, ರಂಗಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News