ತುಮಕೂರು;ಅಮಾನಿಕೆರೆಯನ್ನು ಮನರಂಜನಾ, ಪಿಟ್‍ನೆಸ್ ಕೇಂದ್ರವಾಗಿ ಅಭಿವೃದ್ದಿಪಡಿಸಲು ಕ್ರಮ:ಜಿಲ್ಲಾಧಿಕಾರಿ

Update: 2017-10-23 17:08 GMT

ತುಮಕೂರು.ಅ.25:ತುಮಕೂರು ಅಮಾನೀಕೆರೆಯನ್ನು ಸ್ಮಾರ್ಟ್ ಸಿಟಿಯ ಅನುದಾನದಲ್ಲಿ ಮನರಂಜನಾ ಕೇಂದ್ರದ ಜೊತೆಗೆ ಪಿಟ್‍ನೆಸ್ ಸೆಚಿಟರ್‍ ಆಗಿ ಅಭಿವೃದ್ದಿ ಪಡಿಸಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಕೆ.ಪಿ. ಮೋಹನ್‍ರಾಜ್ ತಿಳಿಸಿದ್ದಾರೆ.

ಮಳೆ ಮತ್ತು ಹೇಮಾವತಿ ನೀರಿನಿಂದ ತುಮಕೂರು ಅಮಾನೀಕೆರೆಗೆ ಶೇ60ರಷ್ಟು ಭರ್ತಿಯಾದ ಹಿನ್ನೆಲೆಯಲ್ಲಿ ಇಂದು ಸಿಇಓ ಕೆ.ಜಿ.ಶಾಚಿತರಾಮ್, ಶಾಸಕರಾದ ಡಾ.ರಫೀಕ್ ಅಹಮದ್ ಅವರೊಂದಿಗೆ ಅಮಾನೀಕೆರೆಗೆ ಭೇಟಿ ನೀಡಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕೆರೆಗೆ ನೀರು ಬಂದಿರುವುದರಿಂದ ತುಂಬ ಸುಂದರವಾಗಿ ಕಾಣುತ್ತಿದೆ.ಇದನ್ನು ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡುವ ಉದ್ದೇಶದಿಂದ ಸ್ಮಾರ್ಟ್‍ಸಿಟಿ ಅನುದಾನವನ್ನು ಬಳಕೆ ಮಾಡಿಕೊಂಡು ಯೋಗ, ವ್ಯಾಯಾಮದ ಜೊತೆಗೆ,ತೆರದ ಜೀಮ್ ವ್ಯವಸ್ಥೆಗೊಳಿಸಿದರೆ ಇನ್ನೂ ಹೆಚ್ಚಿನ ಪ್ರವಾಸಿಗರನ್ನು ಅಕರ್ಷಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಸಿಇಓ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳೊಂದಿಗೆ ಚರ್ಚೆ ನಡೆಸಿ ಪ್ರಸ್ತಾವನೆ ಸಲ್ಲಿಸಿ, ಅನುಮೋದನೆ ಪಡೆಯಲಾಗುವುದು ಎಂದರು.

ಕಳೆದ ಐದಾರು ತಿಂಗಳ ಹಿಂದೆ ಅಮಾನೀಕೆರೆ ರಾಜಗಾಲುವೆ ಒತ್ತುವರಿ ತೆರವು ಮಾಡಿದ್ದರಿಂದ 15 ದಿನಗಳ ಹಿಂದೆ ಸುರಿದ ಬಾರಿ ಮಳೆಗೆ ಕೆರೆಗೆ ನೀರು ಬಂದಿದೆ.ಅಲ್ಲದೆ ಬುಗುಡನಹಳ್ಳಿ ಕೆರೆಯಿಂದಲೂ ನೀರನ್ನು ಪಂಪ್ ಮಾಡಿದ ಪರಿಣಾಮ ಕೆರೆ ಸುಂದರವಾಗಿ ಕಾಣುತ್ತಿದೆ.ಇನ್ನೂ ಕೆಲವು ಕಡೆಗಳಲ್ಲಿ ಒತ್ತುವರಿ ಇದ್ದು,ಅದರನ್ನು ಶೀಘ್ರದಲ್ಲಿಯೇ ತೆರವುಗೊಳಿಸ ಲಾಗುವುದು.ಈಗಾಗಲೇ ಉತ್ತಮವಾಗಿ ಪಾರ್ಕು ನಿರ್ಮಾಣಗೊಂಡಿದೆ.ಇದರ ಜೊತೆಗೆ ಶಿರಾಗೇಟ್ ಭಾಗದಲ್ಲಿಯೂ ಒಂದು ಗೇಟ್ ಸ್ಥಾಪಿಸಿ,ಆ ಭಾಗದಿಂದಲೂ ಜನರು ಬರುವಂತೆ ಮತ್ತು, ಸುತ್ತಲು ವಾಕಿಂಗ್ ಪಾಥ್ ನಿರ್ಮಾಣ ಮಾಡಿದರೆ ಬೆಳಗಿನ ವಾಯುವಿಹಾರಕ್ಕೆ ಹೆಚ್ಚಿನವರಿಗೆ ಅನುಕೂಲವಾಗಲಿದೆ.ಈ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನ್‍ರಾಜ್ ನುಡಿದರು.

ಶಾಸಕ ಡಾ.ರಫೀಕ್ ಅಹಮದ್ ಮಾತನಾಡಿ,ಕಳೆದ ಆಗಸ್ಟ್‍ನಲ್ಲಿ ಜಿಲ್ಲಾಧಿಕಾರಿಗಳು ಅಮಾನಿಕೆರೆಯ ರಾಜಗಾಲುವೆ ಒತ್ತುವರಿ ತೆರವು ಮಾಡಿದ ಹಿನ್ನೆಲೆಯಲ್ಲಿ ನಗರದಲ್ಲಿ ಬಿದ್ದ ಭಾರಿ ಮಳೆಗೆ ಕೆರೆಗೆ ನೀರು ಹರಿದು ಬಂದಿದೆ.ಇದರ ಜೊತೆಗೆ ಬುಗುಡನಹಳ್ಳಿ ಕೆರೆಯಿಂದಲೂ ಅಮಾನೀಕೆರೆಗೆ ನೀರು ಪಂಪ್ ಮಾಡಲಾಗುತ್ತಿದೆ.ಪ್ರಸ್ತುತ ಕೆರೆಯಲ್ಲಿ ಶೇ60ರಷ್ಟು ನೀರಿದ್ದು, ನೋಡಲು ಸುಂದರವಾಗಿ ಕಾಣುತ್ತಿದೆ.ಇತ್ತೀಚೆಗೆ ಸಿದ್ದಗಂಗಾ ಮಠಾಧ್ಯಕ್ಷರಾದ ಡಾ.ಶ್ರೀಶಿವಕುಮಾರಸ್ವಾಮೀಜಿ ಅವರು ಕೆರೆಗೆ ಭೇಟಿ ನೀಡಿ ವೀಕ್ಷಿಸಿ ಖುಷಿ ಪಟ್ಟು ಆಶೀರ್ವದಿಸಿದ್ದಾರೆ.ಅಲ್ಲದೆ ಕೆರೆಗೆ ನೀರು ಬಂದ ನಂತರ ಕೆರೆ ವೀಕ್ಷಣೆಗೆ ಬರುವವರ ಸಂಖ್ಯೆ ಹೆಚ್ಚಾಗಿದ್ದು,ಭಾನುವಾರ 5-6 ಸಾವಿರ ಜನ ಭೇಟಿ ನೀಡಿದ್ದಾರೆ.ಇದಕ್ಕಾಗಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಸಿಇಓ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.ಕೆರೆಯನ್ನು ಮತ್ತಷ್ಟು ಸುಂದರಗೊಳಿಸುವ ನಿಟ್ಟಿನಲ್ಲಿ ಸ್ಮಾರ್ಟ್‍ಸಿಟಿ ಅನುದಾನದಲ್ಲಿ ಅಗತ್ಯ ಕ್ರಮಗಳನ್ನು ಜಿಲ್ಲಾಧಿಕಾರಿಗಳು ಕೈಗೊಳ್ಳಲಿದ್ದಾರೆ ಎಂದರು.ಈ ವೇಳೆ ಸಿಇಓ ಕೆ.ಜಿ.ಶಾಂತರಾಮ್ ಜೊತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News