ಚಿಕ್ಕಮಗಳೂರು : ಸೇವಾದಳ ಕಾಂಗ್ರೆಸ್‍ಗೆ ಸಿಲ್ವಸ್ಟರ್ ನೇಮಕ

Update: 2017-10-23 17:20 GMT

ಚಿಕ್ಕಮಗಳೂರು, ಅ.23: ಚಿಕ್ಕಮಗಳೂರು ಕಾಂಗ್ರೆಸ್ ಜಿಲ್ಲಾ ಸೇವಾದಳದ ಅಧ್ಯಕ್ಷರಾಗಿ ಸಿಲ್ವಸ್ಟರ್(ಸಿಲ್ಲು)ರನ್ನು ನೇಮಕ ಮಾಡಲಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳದ ಅಧ್ಯಕ್ಷರಾದ ಎಸ್. ಪ್ಯಾರಿಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಖಿಲ ಭಾರತ ಸೇವಾದಳದ ಮುಖ್ಯ ಸಂಘಟಿಕ ಮಹೇಂದ್ರ ಜೋಶಿ ನಿರ್ದೇಶನದಂತೆ ನಿಮ್ಮನ್ನು ಚಿಕ್ಕಮಗಳೂರು ಜಿಲ್ಲಾ ಮುಖ್ಯ ಸಂಘಟಿತರಾಗಿ ನೇಮಕ  ಮಾಡಲಾಗಿದೆ. ಸಂಘಟನೆಯ ಹಿತ ದೃಷ್ಟಿಯಿಂದ ಸೇವಾದಳವನ್ನು ಬಲಿಷ್ಠಪಡಿಸುವ ನಿಟ್ಟಿನಲ್ಲಿ ಸೇವಾದಳದ ನಿಯಮದಂತೆ ಶ್ರೀಮತಿ ಸೋನಿಯಾ ಗಾಂಧಿಯವರ ಕೈ ಬಲಪಡಿಸುವ ನಿಟ್ಟಿನಲ್ಲಿ ಈ ಆದೇಶವನ್ನು ತಕ್ಷಣದಿಂದ ಬರುವಂತೆ ಕಾರ್ಯಪ್ರವೃತ್ತರಾಗಲು ಹಾಗೂ ಪ್ರದೇಶ ªಮುಖ್ಯ ಸಂಘಕರ ಆದೀನದಲ್ಲಿ ಕಾರ್ಯ ನಿರ್ವಹಿಸಲು ಸೂಚಿಸಿದ್ದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News