ಮಾಯಾವತಿ ಟೀಕೆ: ಸಂಜಯ್ ದತ್ಗೆ ಸಮನ್ಸ್
Update: 2017-10-26 15:28 GMT
ಬಾರಾಬಂಕಿ (ಉ.ಪ್ರ.), ಅ. 26: 2009ರ ಲೋಕಸಭಾ ಚುನಾವಣೆ ಪ್ರಚಾರದ ಸಂದರ್ಭ ಬಿಎಸ್ಪಿ ವರಿಷ್ಠೆ ಮಾಯಾವತಿ ಅವರನ್ನು ಟೀಕಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ಸ್ಥಳೀಯ ನ್ಯಾಯಾಲಯ ಬಾಲಿವುಡ್ ನಟ ಸಂಜಯ್ ದತ್ಗೆ ಸಮನ್ಸ್ ಜಾರಿ ಮಾಡಿದೆ.
ನವೆಂಬರ್ 16ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ನಿರ್ದೇಶಿಸಿ ಹೆಚ್ಚುವರಿ ಮುಖ್ಯ ನ್ಯಾಯಾಂಗ ದಂಡಾಧಿಕಾರಿ ಸಂಜಯ್ ಯಾದವ್ ಬುಧವಾರ ಸಮನ್ಸ್ ಜಾರಿ ಮಾಡಿದ್ದಾರೆ.
ಸಮನ್ಸ್ ಅನ್ನು ಸಂಜಯ್ ದತ್ ಅವರಿಗೆ ತಲುಪಿಸುವಂತೆ ನ್ಯಾಯಾಲಯ ಮುಂಬೈ ಆಯುಕ್ತರಿಗೆ ನಿರ್ದೇಶಿಸಿದೆ ಎಂದು ಪ್ರಾಸಿಕ್ಯೂಷನ್ ಅಧಿಕಾರಿ ರಮೇಶ್ ಚಂದ್ ಕನ್ನೌಜಿಯಾ ಗುರುವಾರ ತಿಳಿಸಿದ್ದಾರೆ.
2009 ಎಪ್ರಿಲ್ 19ರಂದು ಜಿಲ್ಲೆಯ ಟಿಕಾಯತ್ನಗರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಪರ ಚುನಾವಣಾ ಪ್ರಚಾರದ ಸಂದರ್ಭ ಮಾಂತ್ರಿಕ ಅಪ್ಪುಗೆ (ಜಾದೂಕಿ ಝಪ್ಪಿ) ಎಂದು ಹೇಳುವ ಮೂಲಕ ಸಂಜಯ್ ದತ್ ಸಭಿಕರನ್ನು ನಗಿಸಿದ್ದರು ಹಾಗೂ ಇದನ್ನು ಮಾಯಾವತಿಗೆ ನೀಡುತ್ತೇನೆ ಎಂದು ಹೇಳಿದ್ದರು.