2017ನೆ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

Update: 2017-10-30 14:09 GMT

ಬೆಂಗಳೂರು, ಅ. 30: ಹಿರಿಯ ಲೇಖಕಿ ಡಾ.ವೈದೇಹಿ, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್, ಖ್ಯಾತ ಹಿನ್ನೆಲೆ ಗಾಯಕ ಕೆ.ಜೆ.ಯೇಸುದಾಸ್, ಇತಿಹಾಸ ತಜ್ಞ ರಾಮಚಂದ್ರ ಗುಹಾ, ಒಂದು ಸಂಸ್ಥೆ ಸೇರಿದಂತೆ ಒಟ್ಟು 62 ಮಂದಿಗೆ 2017ನೆ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.

ನ.1ರಂದು ಬೆಂಗಳೂರು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದು, ಪ್ರಶಸ್ತಿ 1ಲಕ್ಷ ರೂ.ನಗದು, 20ಗ್ರಾಂ ಚಿನ್ನದ ಪದಕ ಒಳಗೊಂಡಿರುತ್ತದೆ ಎಂದು ಹೇಳಿದ್ದಾರೆ.

2017ನೆ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಈ ಕೆಳಗಿನಂತಿದೆ.

ನ್ಯಾಯಾಂಗ: ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ (ಕೋಲಾರ).

ಸಾಹಿತ್ಯ: ಡಾ.ಬಸವರಾಜ ಸಬರದ(ಕಲಬುರಗಿ), ಡಾ.ವೈದೇಹಿ(ಉಡುಪಿ), ಮಾಹೆರ್ ಮನ್ಸೂರ್(ತುಮಕೂರು), ಡಾ.ಹನುಮಾಕ್ಷಿ ಗೋಗಿ(ಧಾರವಾಡ) ಹಾಗೂ ಡಿ.ಎಸ್.ನಾಗಭೂಷಣ(ಶಿವಮೊಗ್ಗ).

ರಂಗಭೂಮಿ: ಬೇಲೂರು ಕೃಷ್ಣಮೂರ್ತಿ (ನಾಟಕಕಾರ-ಹಾಸನ), ಗೂಡೂರು ಮಮತಾ (ವೃತ್ತಿ ರಂಗಭೂಮಿ-ಬಾಗಲಕೋಟೆ), ಸಿ.ಕೆ.ಗುಂಡಣ್ಣ (ಹವ್ಯಾಸಿ ರಂಗಭೂಮಿ-ಬೆಂಗಳೂರು), ಶಿವಪ್ಪ ಭರಮಪ್ಪ ಅದರಗುಂಚಿ(ಧಾರವಾಡ), ಎ.ವರಲಕ್ಷ್ಮಿ (ಗ್ರಾಮೀಣ ರಂಗಭೂಮಿ-ಬಳ್ಳಾರಿ) ಹಾಗೂ ಎನ್.ವೈ.ಪುಟ್ಟಣ್ಣಯ್ಯ (ಪೌರಾಣಿಕ- ಮೈಸೂರು).

ಸಿನೆಮಾ-ಕಿರುತೆರೆ: ಡಾ.ಕೆ.ಜೆ.ಯೇಸುದಾಸ್(ಹಿನ್ನೆಲೆ ಗಾಯನ ಚೆನ್ನೈ), ಕಾಂಚನಾ (ನಟನೆ-ಬೆಂಗಳೂರು), ಮುಖ್ಯಮಂತ್ರಿ ಚಂದ್ರು(ಸಿನೆಮಾ ಕಿರುತೆರೆ- ಬೆಂಗಳೂರು) ಹಾಗೂ ಹಾಸನ ರಘು (ಸಾಹಸ ಸಂಯೋಜನೆ-ರಾಮನಗರ).

ಸಂಗೀತ-ನೃತ್ಯ: ವಿದೂಷಿ ಲಲಿತಾ ಜೆ.ರಾವ್(ಹಿಂದೂಸ್ತಾನಿ-ಬೆಂಗಳೂರು), ಪಂ.ರಾಜಪ್ರಭು ಧೋತ್ರೆ(ಅಭಂಗ ಗಾಯಕ-ಬೆಳಗಾವಿ), ರಾಜೇಂದ್ರಸಿಂಗ್ ಪವಾರ್ (ಹಾರ್ಮೋನಿಯಂ-ಬೀದರ್), ವೀರೇಶ ಕಿತ್ತೂರ(ಸುಗಮ ಸಂಗೀತ-ಗದಗ) ಹಾಗೂ ಉಳ್ಳಾಲ ಮೋಹನ್‌ ಕುಮಾರ್(ನೃತ್ಯ-ದಕ್ಷಿಣ ಕನ್ನಡ).

ಜಾನಪ: ತಂಬೂರಿ ಜವರಯ್ಯ (ತತ್ವಪದ-ಮಂಡ್ಯ), ಶಾವಮ್ಮ (ಲಂಬಾಣಿ ನೃತ್ಯ- ಕೊಪ್ಪಳ), ಗೊರವರ ಮೈಲಾರಪ್ಪ(ಗೊರವರ ಕುಣಿತ-ಚಿತ್ರದುರ್ಗ), ತಾಯಮ್ಮ (ಸೋಬಾನೆ ಪದ-ಚಿಕ್ಕಮಗಳೂರು), ಮಾನಪ್ಪ ಈರಪ್ಪ ಲೋಹಾರ (ಪುರವಂತಿಕೆ- ಬಾಗಲಕೋಟೆ), ಕೃಷ್ಣಪ್ಪ ಗೋವಿಂದಪ್ಪ ಪುರದರ (ಡೊಳ್ಳಿನಪದ-ಹಾವೇರಿ) ಹಾಗೂ ಡೆಂಗಮ್ಮ ಕರಡಿಗುಡ್ಡ (ಜಾನಪದ ಗಾಯನ-ರಾಯಚೂರು).

ಯಕ್ಷಗಾನ-ಬಯಲಾಟ: ಶಿವರಾಮ ಜೋಗಿ (ತೆಂಕುತಿಟ್ಟು-ದಕ್ಷಿಣ ಕನ್ನಡ), ಬಳ್ಕೂರು ಕೃಷ್ಣಯಾಜಿ(ಬಡಗುತಿಟ್ಟು-ಉತ್ತರ ಕನ್ನಡ), ಕೆ.ಪಂಪಾಪತಿ ಸಾರಥಿ (ಬಯಲಾಟ-ಬಳ್ಳಾರಿ) ಹಾಗೂ ಈಶ್ವರವ್ವ ಹುಚ್ಚವ್ವ ಮಾದರ (ಬಯಲಾಟ- ವಿಜಯಪುರ).

ಸಮಾಜ ಸೇವೆ: ಮೀರಾನಾಯಕ್ (ಮೈಸೂರು), ಡಾ.ರವೀಂದ್ರನಾಥ್ ಶಾನುಭಾಗ್(ಉಡುಪಿ), ಲೆಫ್ಟಿನೆಂಟ್ ಜನರಲ್ ರಮೇಶ್ ಹಲ್ಲಲಿ(ಬಾಗಲಕೋಟೆ).

ಸಂಕೀರ್ಣ: ರಾಮಚಂದ್ರ ಗುಹಾ(ಇತಿಹಾಸಕಾರ-ಬೆಂಗಳೂರು), ಎಸ್. ಸೈಯದ್ ಅಹ್ಮದ್ (ಪರ್ಷಿಯನ್ ಭಾಷಾತಜ್ಞ-ಬೆಂಗಳೂರು), ಎಚ್.ಬಿ. ಮಂಜುನಾಥ್(ವ್ಯಂಗ್ಯಚಿತ್ರ-ಮೈಸೂರು), ಪ್ರೊ.ಬಿ.ಗಂಗಾಧರಮೂರ್ತಿ(ಶಿಕ್ಷಣ- ಚಿಕ್ಕಬಳ್ಳಾಪುರ).

ಚಿತ್ರಕಲೆ-ಶಿಲ್ಪಕೆಲೆ: ಜಿ.ಎಲ್.ಸಿಂಹ(ಚಿತ್ರಕಲೆ-ಮೈಸೂರು), ಶಾಣಮ್ಮ ಮ್ಯಾಗೇರಿ(ಕೌದಿ ಕಲೆ-ಯಾದಗಿರಿ), ಹೊನ್ನಾಪ್ಪಾಚಾರ್ಯ(ಶಿಲ್ಪಕಲೆ-ಬೆಂಗಳೂರು) ಹಾಗೂ ಮನೋಹರ ಕೆ.ಪತ್ತಾರ(ಶಿಲ್ಪಕಲೆ-ವಿಜಯಪುರ).

ಕೃಷಿ-ಪರಿಸರ: ಡಾ.ಬಿಸಲಯ್ಯ(ಚಾಮರಾಜನಗರ), ಅಬ್ದುಲ್ ಖಾದರ ಇಮಾಮ ಸಾಬ(ಧಾರವಾಡ), ಎಸ್.ಕೃಷ್ಣಪ್ಪ(ಬೆಂಗಳೂರು ಗ್ರಾಮಾಂತರ) ಹಾಗೂ ಸಿ.ಯತಿರಾಜು(ಪರಿಸರ-ತುಮಕೂರು).

ಮಾಧ್ಯಮ: ಕುಸುಮಾ ಶಾನುಭಾಗ್(ಕೊಡಗು), ಎ.ಸಿ.ರಾಜಶೇಖರ್ ಅಬ್ಬೂರು(ರಾಮನಗರ), ವಿಠ್ಠಪ್ಪ ಗೋರಂಟ್ಲಿ(ಕೊಪ್ಪಳ) ಹಾಗೂ ರಾಮದೇವ ರಾಕೆ (ಮಂಡ್ಯ).

ವಿಜ್ಞಾನ-ತಂತ್ರಜ್ಞಾನ: ಡಾ.ಎಂ.ಆರ್.ಶ್ರೀನಿವಾಸನ್(ಅಣುಶಕ್ತಿ ಸಂಶೋಧನೆ ಬೆಂಗಳೂರು), ಡಾ.ಮುನಿವೆಂಕಟಪ್ಪ ಸಂಜಪ್ಪ(ಸಸ್ಯಶಾಸ್ತ್ರ ಸಂಶೋಧನೆ ಕೋಲಾರ).

ವೈದ್ಯಕೀಯ: ಡಾ.ಲೀಲಾವತಿ ದೇವದಾಸ್(ಬೆಂಗಳೂರು).

ಕ್ರೀಡೆ: ಎಲ್. ಶೇಖರ್ ನಾಯಕ್(ಅಂಧರ ಕ್ರಿಕೆಟ್ ಶಿವಮೊಗ್ಗ), ವಿ.ಆರ್.ರಘುನಾಥ್(ಹಾಕಿ -ಕೊಡಗು) ಹಾಗೂ ಸಹನಾಕುಮಾರಿ (ಎತ್ತರ ಜಿಗಿತ-ದಕ್ಷಿಣ ಕನ್ನಡ).

ಶಿಕ್ಷಣ: ಡಾ.ಪಿ.ಶ್ಯಾಮರಾಜು(ಬೆಂಗಳೂರು).

ಇಂಜಿನಿಯರಿಂಗ್: ಬಿ.ಎ.ರಡ್ಡಿ (ಬೆಳಗಾವಿ),

ಹೊಸನಾಡು: ರೋನಾಲ್ಡ್ ಕೊಲಾಸೋ(ದುಬೈ) 

ಸಂಘ-ಸಂಸ್ಥೆ: ನಾಗನೂರು ವಚನ ಅಧ್ಯಯನ ಕೇಂದ್ರ ಹಾಗೂ ಪ್ರಕಾಶನ (ಬೆಳಗಾವಿ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News