ಸಾಲ ಭಾದೆ: ರೈತ ಆತ್ಮಹತ್ಯೆ

Update: 2017-11-04 14:06 GMT

ಮೈಸೂರು, ನ.4: ಸಾಲ ಭಾದೆ ತಾರಲಾರದೆ ರೈತರೊಬ್ಬರು ಕ್ರಿಮಿನಾಶಕ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಯಪುರ ಹೋಬಳಿಯ ಆರೋಹಳ್ಳಿಯಲ್ಲಿ ನಡೆದಿದೆ.

ಮೃತರನ್ನು ಜಯಪುರ ಹೋಬಳಿಯ ಆರೋಹಳ್ಳಿಯ ಈರಣ್ಣ (45) ಎಂದು ಗುರುತಿಸಲಾಗಿದೆ.

ಇವರು ಒಂದೂವರೆ ಲಕ್ಷ ಕೈಸಾಲ ಹಾಗೂ ಪತ್ನಿಯ ಮೂಲಕ ಮಹಿಳಾ ಸಂಘಟನೆಯಲ್ಲಿ 65 ಸಾವಿರ ರೂ ಸಾಲ ಪಡೆದಿದ್ದರು ಎನ್ನಲಾಗಿದ್ದು, ಇದರಿಂದ ಈರಣ್ಣ ಅವರು ತಮ್ಮ ಜಮೀನಿನಲ್ಲಿ ಮಾತ್ರೆ ಸೇವಿಸಿ ಅಸ್ವಸ್ಥನಾರಾಗಿದ್ದರು. ಬಳಿಕ ಮನೆಯವರು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News