ಶೌರ್ಯ ಪ್ರಶಸ್ತಿ ಪ್ರದಾನ
Update: 2017-11-14 17:58 GMT
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ರಾಜ್ಯ ಬಾಲಭವನ ಸೊಸೈಟಿಯು ಕಬ್ಬನ್ ಉದ್ಯಾನದಲ್ಲಿ ಮಂಗಳವಾರ ಆಯೋಜಿಸಿದ್ದ ‘ಮಕ್ಕಳ ದಿನಾಚರಣೆ’ ಕಾರ್ಯಕ್ರಮದಲ್ಲಿ ಸಾಹಸ ಹಾಗೂ ಶೌರ್ಯ ತೋರಿದ ಕೆ.ಆರ್.ನಿತಿನ್ (ದಕ್ಷಿಣ ಕನ್ನಡ), ಸಿ.ಡಿ.ಕೃಷ್ಣ ನಾಯ್ಕ (ಶಿವಮೊಗ್ಗ), ವೈಶಾಖ್ (ದಕ್ಷಿಣ ಕನ್ನಡ), ಜುನೇರಾ ಹರಂ (ಚಾಮರಾಜನಗರ), ಎಚ್.ಕೆ.ದೀಕ್ಷಿತಾ (ಚಿಕ್ಕಬಳ್ಳಾಪುರ), ಎಚ್.ಕೆ.ಅಂಬಿಕಾ (ಚಿಕ್ಕಬಳ್ಳಾಪುರ), ನೇತ್ರಾವತಿ ಚವ್ಹಾಣ (ಬಾಗಲಕೋಟೆ) ಅವರಿಗೆ ರಾಜ್ಯಪಾಲ ವಜೂಭಾಯಿ ರೂಡಭಾಯಿ ವಾಲಾ ಶೌರ್ಯ ಪ್ರಶಸ್ತಿಯನ್ನು ಪ್ರದಾನ ಮಾಡಿದರು.