ಶಿವಮೊಗ್ಗ: ಡ್ಯಾಂಗೆ ಬಿದ್ದು ವೃದ್ಧ ಮೃತ್ಯು
Update: 2017-11-15 19:12 IST
ಶಿವಮೊಗ್ಗ, ನ.15: ಕಾಲುಜಾರಿ ಡ್ಯಾಂಗೆ ಬಿದ್ದು ನೀರಿನಲ್ಲಿ ಮುಳುಗಿ ವೃದ್ಧರೊಬ್ಬರು ಮೃತಪಟ್ಟ ಘಟನೆ ಜಿಲ್ಲೆಯ ಸಾಗರ ತಾಲೂಕಿನ ತಲಕಳಲೆ ಜಲಾಶಯದಲ್ಲಿ ನಡೆದಿದೆ.
ಸಿದ್ದಪ್ಪ (70) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.
ಈ ಸಂಬಂಧ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.