×
Ad

ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಅಪಾರ : ರೇವತಿ ಪೂವಯ್ಯ

Update: 2017-11-19 23:13 IST

ಮಡಿಕೇರಿ,ನ.19 : ಕೊಡಗಿನ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಅಪಾರ ಎಂದು ಕಾವೇರಿ ಕಾಲೇಜ್ ಉಪನ್ಯಾಸಕಿ ಮುಲ್ಲೇಂಗಡ ರೇವತಿ ಪೂವಯ್ಯ ಹೇಳಿದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ವತಿಯಿಂದ ಇಲ್ಲಿನ ಪ್ರಾಥಮಿಕ ಶಾಲಾ ಮೈದಾನದ ಅಪ್ಪನೆರವಂಡ ಅಪ್ಪಚ್ಚ ಕವಿ ವೇದಿಕೆಯಲ್ಲಿ ನಡೆದ 12ನೇ ವರ್ಷದ ಕನ್ನಡ ಸಾಹಿತ್ಯ ಸಮ್ಮೇಳನದ 2ನೇ ದಿನದ ಮಹಿಳಾ ಗೋಷ್ಠಿಯಲ್ಲಿ ಮಹಿಳಾ ಸಾಹಿತ್ಯದ ಮಜಲುಗಳು ಎಂಬ ವಿಷಯ ಮಂಡಿಸಿದರು.
ಬೌಗೋಳಿಕ ಹಾಗೂ ಸಾಂಸ್ಕøತಿಕವಾಗಿ ವಿಭಿನ್ನವಾಗಿರುವ ಕೊಡಗು ಸಾಹಿತ್ಯ ಕ್ಷೇತ್ರದಲ್ಲಿ ವಿಭಿನ್ನ ಕೊಡಗೆ ನೀಡಿದೆ.

ಕೊಡಗಿನ ಮಹಿಳಾ ಸಾಹಿತಿಗಳು ರಚಿಸಿರುವ ಸಣ್ಣಕಥೆ, ಕವನ, ಪ್ರಬಂಧ, ಕಾದಂಬರಿ, ಕ್ಷೇತ್ರ ಪರಿಚಯ, ಜಾನಪದ, ಬಾಲ ಸಾಹಿತ್ಯ, ಗೃಹ ವಿಜ್ಞಾನ, ಅನುವಾದ, ವಿಮರ್ಶೆ, ನಾಟಕಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ಅಪಾರ ಕಾಣಿಕೆ ನೀಡಿದ್ದಾರೆ. ಕೊಡಗಿನ ಗೌರಮ್ಮ, ಪದ್ಮವಾತಿ ರಸ್ತೋಗಿ, ಬುಟ್ಟಿಯಂಡ ದೇವಕ್ಕಿಯಮ್ಮ, ಕೂತಂಡ ಪಾರ್ವತಿ ಪೂವಯ್ಯ,ಪಾಲಚಂಡ ತುಳಸಿ ದೇವಿ, ಡಾ.ಟಿ.ವಿ ಪದ್ಮಾಶೇಖರ್, ಮಂಡೀರ ಜಯ ಅಪ್ಪಣ್ಣ, ಪಾಂಡಂಡ ತಂಗಮ್ಮ, ಕುಸುಮಾ ಶ್ಯಾನ್ ಬಾಗ್, ಡಾ.ಕವಿತಾ ರೈ, ಡಾ.ರೇಖಾ ವಸಂತ್, ಎನ್.ಪಿ ಕಾವೇರಿ, ಬೇಬಿ ಚಿಣ್ಣಪ್ಪ, ನಯನತಾರ, ರಶ್ಮಿ ನಂಜಪ್ಪ, ಗೀತಾ ಮಂದಣ್ಣ, ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ, ಕೇಚಮಾಡ ಸುಬ್ಬಮ್ಮ ತಿಮ್ಮಯ್ಯ, ಸುಶೀಲಾ, ಎಂ.ಟಿ ರತಿ, ವಿಜಯ್ ವಿಷ್ಣು ಭಟ್, ಕಮಲಾ ಕರಿಯಪ್ಪ, ಜಿ.ಜಯಲಕ್ಷ್ಮಿ, ಸ್ಮಿತಾ ಅಮೃತರಾಜ್, ಸಹನಾ ಕಾಂತಬೈಲ್, ಸುನೀತಾ, ಕಸ್ತೂರಿ ಗೋವಿಂದಮಯ್ಯ, ಮೊಣ್ಣಂಡ ಶೋಭ, ಫ್ಯಾನ್ಸಿ ಮುತ್ತಣ್ಣ, ಡಾಣಿ ಪೂವಯ್ಯ ಸೇರಿದಂತೆ ಆನೇಕ ಮಹಿಳಾ ಬರಹಗಾರರು ಬರವಣಿಗೆ ಲೋಕದಲ್ಲಿ ಸಾಧನೆಗೈದಿದ್ದಾರೆ ಎಂದರು.

ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಸಾವಲುಗಳು ಎಂಬ ವಿಷಯ ಮಂಡಿಸಿದ ಸಾಹಿತಿ  ಶ.ಗ.ನಯನತಾರ, ಮಹಿಳೆಯರು ಇಂದು ಜಾಗತಿಕ ಮಟ್ಟದಲ್ಲಿ ಬೆಳವಣಿಗೆ ಹೊಂದಿದ್ದು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿರುವುದು ಸ್ತ್ರೀಶಕ್ತಿ ತೋರಿಸುತ್ತದೆ. ನಾಲ್ಕು ಗೋಡೆಗಳಿಂದ ಹೊರಬಂದು ಸಮಾಜದ ಮುಖ್ಯವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರು ಇಂದು ಪುರುಷ ಪ್ರಧಾನ ಸಮಾಜದಲ್ಲಿ ಮೇಲುಗೈ ಸಾಧಿಸುತ್ತಿದ್ದಾರೆ. ರಾಜಕೀಯ, ಕ್ರೀಡೆ, ಸಾಹಿತ್ಯ, ಕಲೆ, ಸಾಂಸ್ಕøತಿಕ ಕ್ಷೇತ್ರದಲ್ಲಿ ಮುನ್ನಡೆಯುತ್ತಿರುವ ಮಹಿಳೆಯರು ಪುರುಷರಿಗೆ ಸಾವಲೊಡ್ಡಿ ಆರ್ಥಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮುನ್ನಡೆಯುತ್ತಿದ್ದಾರೆ. ಜೊತೆಗೆ ಸಾಹಿತ್ಯ ಕ್ಷೇತ್ರಕ್ಕೂ ಮಹಿಳೆಯರು ಸೇವೆ ನೀಡಿದ್ದಾರೆ ಎಂದರು.

ಕೌಟುಂಬಿಕವಾಗಿ ಪುರುಷ ಸದೃಡನಾಗಿದ್ದಾರೆ ಸಮಾಜದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಸ್ತ್ರೀಯರಿಂದ ಪುರುಷನ ಮಾನಸಿಕ ಸ್ಥಿತಿ ಉತ್ತಮವಾಗುತ್ತದೆ ಆದರೇ ಮಹಿಳೆಯರನ್ನು ಕಡೆಗಣಿಸುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ಸಾಹಿತಿ ಉಳಿಯಂಡ ಡಾಟಿ ಪೂವಯ್ಯ ಹೇಳಿದರು. ಕೌಟುಂಬಿಕ ವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯ ಮಂಡಿಸಿದ ಅವರು, ಅನಿಷ್ಟ ಪದ್ದತಿಗಳಿಂದ ಬಳಲಿದ ಮಹಿಳೆ ಇದ್ದು ಕುಟುಂಬದ ಆದಾರ ಸ್ಥಂಬವಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ಪ್ರಸ್ತುತ ಅಧುನಿಕತೆಯ ನಡುವೆ ಕೆಲಸ ಮಾಡಿ ಮನೆಯಲ್ಲಿ ದುಡಿಯುತ್ತ ಸಂಸಾರದ ಕಣ್ಣಾಗಿದ್ದಾಳೆ. ಪುರುಷ ಪ್ರದಾನ ಪ್ರಪಂಚದಲ್ಲಿ ಪುರುಷರನ್ನು ಮೀರಿಸುವ ಶಕ್ತಿ ಹೆಣ್ಣಿಗಿದೆ. ಸಾಮಾಜಿಕವಾಗಿ ಶಕ್ತಿ ತುಂಬಿಸುವ ಕೆಲಸವನ್ನು ಮಹಿಳೆ ಮಾಡುತ್ತಿದ್ದಾಳೆ. ಆದರೆ ಸ್ತ್ರೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಸ್ತ್ರೀಶಕ್ತಿಯನ್ನು ಕುಗ್ಗಿಸುವ ಕೆಲಸ ಮಾಡುತ್ತಿದೆ ಅತ್ಯಾಚಾರ, ಭ್ರೂಣ ಹತ್ಯೆ, ದಬ್ಬಾಳಿಕೆ, ಮಾನಸಿಕ ಹಾಗೂ ದೈಹಿಕ ಹಲ್ಲೆ, ವರದಕ್ಷಿಣೆ ಕಿರುಕುಳಕ್ಕೆ ಒಳಗಾಗುತ್ತಿದ್ದಾಳೆ ಎಂದರು. 

ಹಿರಿಯ ಸಾಹಿತಿ ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಾಹಿತಿ ಸುಶೀಲಾ, ಸೋಮವಾರಪೇಟೆ ಪದವಿ ಪೂರ್ವ ಕಾಲೇಜ್ ಪ್ರಾಂಶುಪಾಲೆ ತಿಲೋತ್ತಮೆ, ಶಿಕ್ಷಕಿ ಶಾಲಿನಿ, ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News