ಮಂಡ್ಯ: ವಿದ್ಯುತ್ ತಗುಲಿದ್ದ ರೈತ ಮೃತ್ಯು

Update: 2017-11-20 17:00 GMT

ಮಂಡ್ಯ, ನ.20: ಜಮೀನು ಬಳಿ ಪಂಪ್‍ಸೆಟ್ ಸ್ವಿಚ್ ಹಾಕಲು ಯತ್ನಿಸಿದ ರೈತರೋರ್ವರಿಗೆ ವಿದ್ಯುತ್ ತಗುಲಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಳವಳ್ಳಿ ತಾಲೂಕಿನ ಗೊಲ್ಲರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಹದೇವೇಗೌಡ(48) ಮೃತಪಟ್ಟ ರೈತ ಎಮದು ಗುರುತಿಸಲಾಗಿದೆ.

ಇವರು ರವಿವಾರ ಸಂಜೆ ಬೆಳೆಗೆ ನೀರುಣಿಸಲು ಪಂಪ್‍ಸೆಟ್ ಸ್ವಿಚ್ ಹಾಕಿದಾಗ ವಿದ್ಯುತ್ ತಗುಲಿ ಮೃತಪಟ್ಟರು ಎನ್ನಲಾಗಿದ್ದು, ಸೋಮವಾರ ಶವಪರೀಕ್ಷೆ ನಡೆಯಿತು.

ಈ ಬಗ್ಗೆ ಹಲಗೂರು ಪೊಲೀಸರು ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News