ಆಟೋ ಢಿಕ್ಕಿ : ಪಾದಚಾರಿ ಸಾವು
Update: 2017-11-26 22:55 IST
ಮದ್ದೂರು, ನ.26: ಆಟೋರಿಕ್ಷಾ ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಯರಗನಹಳ್ಳಿಯಲ್ಲಿ ಶನಿವಾರ ತಡರಾತ್ರಿ ಜರುಗಿದೆ.
ಗ್ರಾಮದ ಕುಂಟೇಗೌಡರ ಪುತ್ರ ತಮ್ಮಯ್ಯ(70) ಸಾವನ್ನಪ್ಪಿದವರು. ಇವರು ರಸ್ತೆಬದಿ ನಡೆದು ಹೋಗುತ್ತಿದ್ದಾಗ ಕೆಸ್ತೂರು ಕಡೆಯಿಂದ ಬಂದ ಆಟೋರಿಕ್ಷಾ ಡಿಕ್ಕಿಹೊಡೆದಿದೆ.ಕೆಸ್ತೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.