ಗೋರಿಗೆ ಹಾನಿಮಾಡಿರುವುದು ಪೂರ್ವ ಯೋಜಿತ ಕೃತ್ಯ: ಸುನ್ನಿ ಸಂಘಟನೆಗಳ ಒಕ್ಕೂಟ

Update: 2017-12-05 15:58 GMT

ಚಿಕ್ಕಮಗಳೂರು, ಡಿ.5: ಬಾಬಾಬುಡನ್‍ಗಿರಿಯಲ್ಲಿನ ನಿರ್ಬಂಧಿತ ಪ್ರದೇಶದಲ್ಲಿ ಭಗವಾದ್ವಜ ಹಾರಿಸಿರುವುದು ಮತ್ತು ಗೋರಿಗೆ ಹಾನಿಮಾಡಿರುವುದು ಪೂರ್ವ ಯೋಜಿತ ಕೃತ್ಯವಾಗಿದ್ದು ಅದಕ್ಕೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ವೈಫಲ್ಯ ಕಾರಣ ಎಂದು ಹಜರತ್ ದಾದ ಹಯಾತ್ ಮೀರ್‍ಖಲಂದರ್ ಸಮಿತಿಯ ಅಧ್ಯಕ್ಷ ಸಿರಾಜ್‍ಹುಸೇನ್ ಹೆಳಿದರು.

   ಅವರು ಮಂಗಳವಾರ ನಗರದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ದತ್ತ ಜಯಂತಿಯಂದು ಗಿರಿಯಲ್ಲಿನ ನಿಷೇಧಿತ ಪ್ರದೇಶದಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಭಗವಾ ಧ್ವಜಹಾರಿಸಿರುವುದು ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ. ತಕ್ಷಣ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ತಾವುಗಳು ಆಗ್ರಹಪಡಿಸುತ್ತಿದ್ದೇವೆ. ಈ ಸಂಘಟನೆಗಳಿಗೆ ಪೋಲೀಸ್ ಹಾಗೂ ಜಿಲ್ಲಾಡಳಿತದ ವೈಫಲ್ಯವೇ ಕಾರಣವೆಂದು ಆರೋಪಿಸಿದರು.

  ಪ್ರತಿವರ್ಷ ಸಂಘಪರಿವಾರದ ಕಾರ್ಯಕರ್ತರು ದತ್ತಮಾಲೆ ಮತ್ತು ದತ್ತ ಜಯಂತಿ ಕಾರ್ಯಕ್ರಮದಲ್ಲಿ ಕಾನೂನು ಉಲ್ಲಂಘಿಸುತ್ತಿದ್ದು ಅಂತಹ ಕೃತ್ಯವನ್ನು ಖಂಡಿಸಬೇಕಾದ ಶಾಸಕರು ಅದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರು 1989ರ ಪದ್ದತಿಯನ್ನು ಕೋರ್ಟ್ ಆದೇಶದಂತೆ ಅನುಸರಿಸದೆ ಉಲ್ಲಂಘಿಸಲು ಅನುವು ಮಾಡಿಕೊಡಲಾಗುತ್ತಿದೆ. ಹೊಸಾಚರಣೆಗಳಿಗೆ ಅವಕಾಶಮಾಡಿ ಕೊಡಲಾಗುತ್ತಿದೆ ಎಂದು ಹೇಳಿದರು.

  ದತ್ತಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲು ಯಾರ ವಿರೋಧವೂ ಇಲ್ಲ. ಆದರೆ ರಾಜಕೀಯ ಲಾಭದ ಹುನ್ನಾರಕ್ಕಾಗಿ ಹೊಸಕಾರ್ಯಕ್ರಮಗಳನ್ನು ನಡೆಸಿ ಜಿಲ್ಲೆಯಲ್ಲಿ ಕೋಮುಗಲಭೆ ಸೃಷ್ಟಿಸುವ ಪ್ರಯತ್ನಮಾಡಲಾಗುತ್ತಿದ್ದು ಅಂತಹವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕಾನೂನುಕ್ರಮ ತೆಗೆದು ಕೊಳ್ಳಬೇಕೆಂದು ತಮ್ಮಒಕ್ಕೂಟ ಒತ್ತಾಯಿಸುವುದಾಗಿ ತಿಳಿಸಿದರು.

  ಸಂಘ ಪರಿವಾರದವರು ಆಗಾಗ್ಗೆ ಬಾಬಾಬುಡಾನ್‍ಗಿರಿ ಬಗ್ಗೆ ತಮ್ಮ ಬಳಿ 1817 ಮತ್ತು 1877 ದಾಖಲೆಗಳಿವೆ. ತಾವುಗಳು ಸುಪ್ರೀಂಕೋರ್ಟ್‍ಗೆ ಪ್ರಕರಣ ದಾಖಲಿಸಿದ್ದೇವೆ ಎಂದು ಹೇಳಿಕೆ ನೀಡುತ್ತಾರೆ. ಅವೆಲ್ಲವೂ ಸುಳ್ಳು. ಅಂತಹ ದಾಖಲೆಗಳಿದ್ದರೆ ಬಹಿರಂಗಪಡಿಸಲಿ ಮತ್ತು ಕೋರ್ಟ್‍ಮೊರ ಹೋಗಿರುವ ದಾಖಲೆ ಯನ್ನು ಬಿಡುಗಡೆಗೊಳಿಸಲಿ ಎಂದು ಸವಾಲು ಹಾಕಿದ ಅವರು, 1995ರ ಪಹಣಿ ತೋರಿಸಿ 1942ರಿಂದ ದಾಖಲೆ ಇದೆ ಎನ್ನುತ್ತಾರೆ. ಹಾಗಾದರೆ 1994ರ ಪಹಣಿತೋರಿಸಲಿ ಎಂದು ಹೇಳಿದರು.

  ಗೋಷ್ಠಿಯಲ್ಲಿ ಯೂಸುಫ್‍ಹಾಜಿ, ಮಹಮ್ಮದ್ ಸಫಾನ್, ಶಂಶುದ್ದೀನ್, ಔರಂಗ್‍ಪಾಶ, ಮುಬಾರಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News