ಸಾಲಬಾಧೆ:ರೈತ ಆತ್ಮಹತ್ಯೆ

Update: 2017-12-09 14:50 GMT

ಮಂಡ್ಯ, ಡಿ.9: ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ರೈತರೊಬ್ಬರು ಜಮೀನಿನ ಬಳಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಡಿದ್ದಾರೆ.
ದಿವಂಗತ ನಂಜುಂಡೇಗೌಡ ಅವರ ಪುತ್ರ ಎಸ್.ಎನ್.ರಾಜು(40) ಆತ್ಮಹತ್ಯೆ ಮಾಡಿಕೊಂಡವರು. ಇವರು ಒಂದೂವರೆ ಎಕೆರೆ ಭೂಮಿಯಲ್ಲಿ ಬೆಳೆ ಬೆಳೆದು ನಷ್ಟಕ್ಕೊಳಗಾಗಿದ್ದರು.

ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 85 ಸಾವಿರ ರೂ., ವಿಜಯ ಬ್ಯಾಂಕ್‍ನಲ್ಲಿ 1.40  ಲಕ್ಷ ರೂ., 35 ಸಾವಿರ ರೂ. ಚಿನ್ನಾಭರಣ ಸಾಲದ ಜತೆಗೆ 2 ಲಕ್ಷ ರೂ. ಕೈಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.

ಪತ್ನಿ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಕಾಳಮುದ್ದನದೊಡ್ಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News